ಸಹೋದ್ಯೋಗಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

Update: 2018-01-06 11:54 GMT

ಮೂಡಿಗೆರೆ, ಜ.6: ರೈಟರ್ ಮತ್ತು ಡ್ರೈವರ್ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ ನಡೆದಿದೆ.

ಕೊಲೆಗೀಡಾದ ವ್ಯಕ್ತಿಯನ್ನು ಸುರೇಶ್(50) ಎಂದು ಗುರುತಿಸಲಾಗಿದೆ. ಜಯಪ್ರಕಾಶ್ ಎಂಬವರ ಕಾಫಿ ತೋಟದಲ್ಲಿ ಸುರೇಶ್ ರೈಟರ್ ಆಗಿ ಕೆಲಸ ಮಾಡುತ್ತಿದ್ದರು. ಅದೇ ತೋಟದಲ್ಲಿ ಡ್ರೈವರ್ ಕೆಲಸ ಮಾಡುತ್ತಿದ್ದ ಸತೀಶ್ ಎಂಬಾತ ಮದ್ಯ ಸೇವನೆಯ ಅಮಲಿನಲ್ಲಿ ಕೃತ್ಯ ಎಸಗಿದ್ದಾನೆ. 

ಆರೋಪಿ ಸತೀಶ್ ಮತ್ತು ರೈಟರ್ ಸುರೇಶ್ ನಡುವೆ ನಿನ್ನೆ ತಡರಾತ್ರಿ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ಸತೀಶ್ ಮಾರಕಾಯುಧ ಬಳಸಿ ಸುರೇಶ್ ಮೇಲೆ ದಾಳಿ ನಡೆಸಿದ್ದ. ಮಾರಣಾಂತಿಕ ಹಲ್ಲೆಯ ಪರಿಣಾಮ ಸುರೇಶ್ ಸ್ಥಳದದಲ್ಲಿಯೇ ಮೃತಪಟ್ಟಿದ್ದಾರೆ.

ಮೃತನ ಪುತ್ರ ನೀಡಿರುವ ದೂರನ್ನು ಆಧರಿಸಿ ಮೂಡಿಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಸತೀಶ್‍ನನ್ನು ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News