ಮೇಲುಕೋಟೆಯಲ್ಲಿ ಚಿರತೆ ಪ್ರತ್ಯಕ್ಷ

Update: 2018-01-06 16:27 GMT
ಸಾಂದರ್ಭಿಕ ಚಿತ್ರ

ಮಂಡ್ಯ, ಜ.6: ಪುರಾಣ ಪ್ರಸಿದ್ಧ ಪಾಂಡವಪುರ ತಾಲೂಕು ಮೇಲುಕೋಟೆಯ ಯೋಗಾನರಸಿಂಹಸ್ವಾಮಿ ಬೆಟ್ಟದ ಬಳಿ ಚಿರತೆಯೊಂದು ನಾಯಿಮರಿಗಳನ್ನು ತಿಂದುಹಾಕಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಬೆಟ್ಟದ ಬಳಿ ಇರುವ ಸಂತೆಮಾಳದಲ್ಲಿ ಬೀದಿನಾಯಿ ಆರು ಮರಿಗಳಿಗೆ ಜನ್ಮನೀಡಿದ್ದು, ಶುಕ್ರವಾರ ತಡರಾತ್ರಿ ಚಿರತೆ ಮರಿಗಳನ್ನು ಕೊಂದು ಹಾಕಿ ಮೂರು ಮರಿಗಳನ್ನು ಹೊತ್ತೊಯ್ದಿದೆ ಎನ್ನಲಾಗಿದೆ.

ಈ ಹಿಂದೆಯೂ ಹಲವು ಬಾರಿ ಚಿರತೆ ಕಾಣಿಸಿಕೊಂಡಿದ್ದು, ಭಕ್ತರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಕೂಡಲೇ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News