ಕರ್ನಾಟಕ ಯುವಶಕ್ತಿ ಸಂಘಟನೆಯಿಂದ ಬಂದ್‍ಗೆ ಬೆಂಬಲ ಇಲ್ಲ: ಗಜೇಂದ್ರ

Update: 2018-01-24 17:42 GMT

ಮೂಡಿಗೆರೆ, ಜ.24: ಮಹದಾಯಿ ನೀರಿನ ಹೋರಾಟದ ಸಲುವಾಗಿ ಜ.25ರಂದು ಕೆಲವು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್‍ಗೆ ನವ ಕರ್ನಾಟಕ ಯುವಶಕ್ತಿ ಸಂಘಟನೆಯಿಂದ ಬೆಂಬಲ ನೀಡಿಲ್ಲ ಎಂದು ತಾಲೂಕು ಅಧ್ಯಕ್ಷ ಗಜೇಂದ್ರ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿ, ಮಹದಾಯಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಇಂತಹ ವಿಷಯ ಮುಂದಿಟ್ಟುಕೊಂಡು ಪದೇ ಪದೇ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News