ವೈಯಕ್ತಿಕ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ :ಜೇಟ್ಲಿ
ಹೊಸದಿಲ್ಲಿ, ಫೆ.1: ಕೇಂದ್ರ ಸರಕಾರದ 2018-19ನೇ ಸಾಲಿನ ಕೇಂದ್ರ ಸಾಮಾನ್ಯ ಬಜೆಟ್ ನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದರು.
2018-19ನೇ ಸಾಲಿನ ಕೇಂದ್ರ ಬಜೆಟ್ ನ ಹೈಲೈಟ್ಸ್
*ವಿಮಾನ ನಿಲ್ದಾಣಗಳ ಸಂಖ್ಯೆ 5 ಪಟ್ಟು ಹೆಚ್ಚಳ
*5 ಲಕ್ಷ ಗ್ರಾಮಗಳಿಗೆ ವೈಫೈ ಸೌಲಭ್ಯ
*ಡಿಜಿಟಲ್ ಇಂಡಿಯಾಗಾಗಿ 3073 ಕೋಟಿ ರೂ ಅನುದಾನ
*ಎಲ್ಲಾ ವಿಮಾ ಕಂಪನಿಗಳನ್ನೂ ಒಗ್ಗೂಡಿಸಲಾಗುವುದು
*ಕಸ್ಟಮ್ಸ್ ಡ್ಯೂಟಿ ಹೆಚ್ಚಿಸಿದ ಕೇಂದ್ರ ಸರಕಾರ
*ಹಿರಿಯ ನಾಗರಿಕರ ಆರೋಗ್ಯ ವಿಮೆಯ ಪ್ರೀಮಿಯಮ್ ಮತ್ತು ವೈದ್ಯಕೀಯ ವೆಚ್ಚಗಳಿಗೆ ಆದಾಯ ತೆರಿಗೆ ಮಿತಿ 30 ಸಾವಿರ ರೂ.ನಿಂದ 50 ಸಾವಿರ ರೂ. ಏರಿಕೆ .
*ಕ್ಷಯರೋಗಿಗಳಿಗೆ ತಿಂಗಳಿಗೆ 600 ರೂ ನೆರವು
*ನೇರ ತೆರಿಗೆ 12.6ರಷ್ಟು ಹೆಚ್ಚಳವಾಗಿದೆ
*ತೆರಿಗೆದಾರರ ಸಂಖ್ಯೆಯಲ್ಲಿ 19.25 ಲಕ್ಷ ಹೆಚ್ಚಳ.
ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ
*ವೈಯಕ್ತಿಕ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಿಂದಿನ ಆದಾಯ ತೆರಿಗೆಯನ್ನು ಮುಂದುವರಿಸಲಾಗಿದೆ.
*2.50 ಲಕ್ಷ ರೂ. ತನಕದ ಆದಾಯಕ್ಕೆ ಸದ್ಯ ಯಾವುದೇ ತೆರಿಗೆ ಇಲ್ಲ.
*2.50 ಲಕ್ಷ ರೂ- 5 ಲಕ್ಷ ರೂ . ತನಕ ಶೇ 5ರಷ್ಟು ತೆರಿಗೆ
*5 ರಿಂದ 10 ಲಕ್ಷ ರೂ. ಆದಾಯಕ್ಕೆ ಶೇ 20ರಷ್ಟು ತೆರಿಗೆ.
*10ಲಕ್ಷ ರೂ.ಗಿಂತ ಮೇಲ್ಪಟ್ಟು ಶೇ 30ರಷ್ಟು ತೆರಿಗೆ
ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ
*3 ಲಕ್ಷ ರೂ ತನಕ ತೆರಿಗೆ ಇಲ್ಲ
*3 ಲಕ್ಷ ರೂ- 5 ಲಕ್ಷ ರೂ. ಶೇ 5
*5 ರಿಂದ 10 ಲಕ್ಷ ರೂ. ಆದಾಯಕ್ಕೆ ಶೇ 20ರಷ್ಟು ತೆರಿಗೆ.
*10ಲಕ್ಷ ರೂ.ಗಿಂತ ಮೇಲ್ಪಟ್ಟು ಶೇ 30ರಷ್ಟು ತೆರಿಗೆ
* 40 ಸಾವಿರ ರೂ. ತನಕ ಚಿಕಿತ್ಸಾ ವೆಚ್ಚಕ್ಕೆ ತೆರಿಗೆ ವಿನಾಯಿತಿ. ಈವರೆಗೆ ಇದ್ದ ತೆರಿಗೆ ಮಿತಿ 15 ಸಾವಿರ ರೂ.
*1 ಲಕ್ಷ ಗ್ರಾಮ ಪಂಚಾಯತ್ ಗಳಿಗೆ ಹೈ ಸ್ಪೀಡ್ ಇಂಟರ್ ನೆಟ್
*ರೈಲು ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು.
*ದೇಶದೆಲ್ಲೆಡೆ ಇರುವ ಬ್ರಾಡ್ ಗೇಜ್ ಮಾರ್ಗ ಉನ್ನತೀಕರಣ
*ಭಾರತ್ ಮಾಲಾ ಯೋಜನೆಯಡಿ 36ಸಾವಿರ ಕಿಮೀ ಮೇಲ್ದರ್ಜೆಗೆ 1 ಲಕ್ಷ 48 ಸಾವಿರದ 500 ಕೋಟಿ ರೂ. ರೈಲ್ವೆಗೆ ಅನುದಾನ ನೀಡಲಾಗುವುದು.
*ಸಬ್ ಅರ್ಬನ್ ರೈಲು ಯೋಜನೆಗೆ ಒಟ್ಟು 40 ಸಾವಿರ ಕೋಟಿ ರೂ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ 17 ಸಾವಿರ ಕೋಟಿ ರೂ.
*ವಡೋದರಾದಲ್ಲಿ ರೈಲ್ವೆ ವಿವಿ ಸ್ಥಾಪನೆ
*ಈ ವರ್ಷ ನೂತನವಾಗಿ 100 ಸ್ಮಾರ್ಟ್ ಸಿಟಿ ನಿರ್ಮಾಣದ ಯೋಜನೆ . ಸ್ಮಾರ್ಟ್ ಸಿಟಿಗೆ 2.4 ಲಕ್ಷ ಕೋಟಿ ಅನುದಾನ
*ಐಐಟಿ ಚೆನ್ನೈನಲ್ಲಿ 5 ಜಿ ಅಧ್ಯಯನ ಕೇಂದ್ರ
*ರಕ್ಷಣಾ ಇಲಾಖೆಯಲ್ಲಿ ಖಾಸಗಿ ಹೂಡಿಕೆ
* ರಕ್ಷಣಾ ಇಲಾಖೆಗೆ 2 ಶಸ್ತ್ರಾಸ್ತ್ರ ನಿರ್ಮಾಣ ಕಾರಿಡಾರ್
* ಎಲ್ಲ ವಿಮಾ ಕಂಪೆನಿಗಳನ್ನು ಒಗ್ಗೂಡಿಸಲಾಗುವುದು.
*ಪ್ರತಿ ಕುಟುಂಬಕ್ಕೂ 5 ಲಕ್ಷ ರೂ. ತನಕ ಆರೋಗ್ಯ ವಿಮೆ.
ರಾಷ್ಟ್ರಪತಿ, ಉಪರಾಷ್ಟ್ರ ಪತಿ, ರಾಜ್ಯಪಾಲರುಗಳ ವೇತನ ಹೆಚ್ಚಳ:
ರಾಷ್ಟ್ರಪತಿಗೆ 5 ಲಕ್ಷ ರೂ, ಉಪರಾಷ್ಟ್ರಪತಿಗೆ 4 ಲಕ್ಷ ರೂ ಮತ್ತು ರಾಜ್ಯಪಾಲರುಗಳಿಗೆ 3.50 ಲಕ್ಷ ರೂ. ವೇತನ ನಿಗದಿ. ಸಂಸದರ ವೇತನ 5 ವರ್ಷಗಳಿಗೊಮ್ಮೆ ಪರಿಷ್ಕರಣೆ
* ಉದ್ಯೋಗಾಕಾಂಕ್ಷಿಗಳಿಗೆ ಆಧಾರ್ ಮಾದರಿಯ ನಂಬರ್
*ಜಿಎಸ್ ಟಿ ಈ ಬಾರಿ 12 ತಿಂಗಳ ಬದಲಿಗೆ 11 ತಿಂಗಳು
* 4 ವರ್ಷಗಳಿಂದ ಸ್ವಚ್ಛ ಮತ್ತು ಪಾರದರ್ಶಕ ಆಡಳಿತ ನೀಡಲಾಗಿದೆ.
*ಬಡತನ ನಿರ್ಮೂಲನೆಗೆ ಆದ್ಯತೆ ನೀಡಲಾಗಿದೆ.
*ಆರ್ಥಿಕ ಸುಧಾರಣೆಗೆ ದಿಟ್ಟ ಹೆಜ್ಜೆ ಇರಿಸಲಾಗಿದೆ.
* ದೇಶದ ಜನತೆಗೆ ನೀಡಿದ ಭರವಸೆಯಂತೆ ನಡೆದುಕೊಂಡಿದ್ದೇವೆ.
*ಜನರಿಗೆ ಅಗ್ಗದ ದರದಲ್ಲಿ ಔಷಧಿಗಳು ದೊರೆಯುತ್ತಿದೆ.
* 2017-18ನೇ ಆಹಾರದ ಉತ್ಪಾದನೆಯಲ್ಲಿ ದೇಶ ದಾಖಲೆ ನಿರ್ಮಿಸಿದೆ.
*ಕೃಷಿಯನ್ನು ಲಾಭದಾಯಕವಾಗಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.
*ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕಿದೆ. ಹೆಚ್ಚಿನ ಬೆಲೆ ದೊರಕಿಸಿಕೊಡಲು ಪ್ರಯತ್ನ ನಡೆಸಲಾಗಿದೆ
*ರೈತರಿಗೆ ಉತ್ಪನ್ನಗಳ ಬೆಲೆ ನಿಗದಿಗೆ ಸ್ವಾತಂತ್ರ್ಯ ನೀಡಲಾಗಿದೆ.
*ಕೃಷಿ ಉಗ್ರಾಣಗಳ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಸಲು ಕ್ರಮ ಕೈಗೊಳ್ಳಲಾಗಿದೆ.
*2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
*ದೇಶದಲ್ಲಿ ನಿಜವಾದ ಅಚ್ಚೇದಿನ ಬರುತ್ತಿದೆ. ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಕ್ರಮ.
*ಈರುಳ್ಳಿ, ಅಲೂಗಡ್ಡೆ, ಟೊಮ್ಯಾಟೊ ಉತ್ಪಾದನೆಗೆ 500 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಕೃಷಿಕರು, ಹೈನುಗಾರರು, ಮೀನುಗಾರರಿಗೆ ಕಿಸಾನ್ ಕಾರ್ಡ್.
*ಎಪಿಎಂಸಿ ಉನ್ನತೀಕರಣಕ್ಕೆ 2,000 ಕೋಟಿ, ರೈತರ ಅನುಕೂಲಕ್ಕೆ 22 ಸಾವಿರ ಮಾರುಕಟ್ಟೆ
*ಅಹಾರ ಸಂಸ್ಕರಣೇ ಖಾದಿ ಗ್ರಾಮೋದ್ಯಮಕ್ಕೆ 200 ಕೋಟಿ ಅನುದಾನ
*ಆಪರೇಷನ್ ಗ್ರೀನ್ ಗೆ 500 ಕೋಟಿ ರೂ ಮೀಸಲು
*2022 ವೇಳೆಗೆ ಮನೆ ಇಲ್ಲದವರಿಗೆ ಸ್ವಂತ ಮನೆ ನಿರ್ಮಾಣ. 33 ಲಕ್ಷ ಮನೆ ನಿರ್ಮಾಣ ಗುರಿ.
*ಉಜ್ವಲಾ ಯೋಜನೆಯಲ್ಲಿ 8 ಕೋಟಿ ಗ್ಯಾಸ್ ಸಂಪರ್ಕ, ಸೌಭಾಗ್ಯ ಯೋಜನೆಯಲ್ಲಿ 4 ಕೋಟಿ ವಿದ್ಯುತ್ ಸಂಪರ್ಕ.
* ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ವ್ಯವಸ್ಥೆಗೆ 16,000 ಕೋಟಿ ರೂ.
*ಸ್ವಚ್ಛ ಭಾರತ ಯೋಜನೆಯಲ್ಲಿ ಮುಂದಿನ ಎರಡು ವರ್ಷಗಳಲ್ಲಿ 2 ಲಕ್ಷ ಶೌಚಾಲಯಗಳ ನಿರ್ಮಾಣ.
*20 ಲಕ್ಷ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಬ್ಲ್ಯಾಕ್ ಬೋರ್ಡ್ ಬದಲು ಡಿಜಿಟಲ್ ಬೋರ್ಡ್ ಗೆ ಕ್ರಮ
*ಬಿದಿರು ಬೆಳೆಯ ಅಭಿವೃಧ್ದಿಗೆ 1290 ಕೋಟಿ ರೂ.
* ಗ್ರಾಮಿಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 14.34 ಲಕ್ಷ ಕೋಟಿ ರೂ. ಒದಗಿಸಲಾಗಿದೆ.
* ಈ ವರ್ಷ 70 ಲಕ್ಷ ಹೊಸ ಉದ್ಯೋಗಗಳ ಸೃಷ್ಠಿ
* ಮೂರು ಲೋಕಸಭಾ ವ್ಯಾಪ್ತಿಗೊಳಪಟ್ಟು 1 ಮೆಡಿಕಲ್ ಕಾಲೇಜು ಸ್ಥಾಪನೆ, 24 ಮೆಡಿಕಲ್ ಕಾಲೇಜು ಆಸ್ಪತ್ರೆ ಆರಂಭಕ್ಕೆ ಕ್ರಮ
*ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ 3 ಲಕ್ಷ ಕೋಟಿ ರೂ. ಒದಗಿಸಲಾಗುವುದು.
* ಪರಿಶಿಷ್ಟ ಜಾತಿ ಕಲ್ಯಾಣಕ್ಕಾಗಿ 56, 619 ಕೋಟಿ ರೂ. ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ 39,135 ಕೋಟಿ ರೂ
* ದಿಲ್ಲಿ, ಹರ್ಯಾಣ, ಪಂಜಾಬ್, ಉತ್ತರ ಪ್ರದೇಶದಲ್ಲಿ ಮಾಲಿನ್ಯ ಕಡಿಮೆ ಮಾಡಲು ವಿಶೇಷ ಯೋಜನೆಗಳನ್ನು ಆರಂಭಿಸಲಾಗುವುದು.