ಬಿಜೆಪಿಗೆ ಸುಳ್ಳು ಹೇಳುವುದು ಬಿಟ್ರೆ ಬೇರೇನೂ ಬರಲ್ಲ: ಸಿಎಂ

Update: 2018-02-04 08:14 GMT

ಬೆಂಗಳೂರು, ಫೆ.4:ಬಿಜೆಪಿಗೆ ಸುಳ್ಳು ಹೇಳುವುದು ಬಿಟ್ರೆ ಬೇರೆನೂ ಬರಲ್ಲ .ಸುಳ್ಳು ಹೇಳುವುದೇ ಬಿಜೆಪಿಯ ಜೀವನವಾಗಿದೆ. ತೆರಿಗೆ ವಿಚಾರದಲ್ಲೂ ಬಿಜೆಪಿ ಸುಳ್ಳು ಹೇಳಿದೆ.  ಬಿಜೆಪಿಯವರು ಏನು ಹೇಳಿದರೂ ರಾಜ್ಯದ ಜನರು ಅವರನ್ನು ನಂಬುವುದಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಕರ್ನಾಟಕಕ್ಕೆ ಯಾರೂ ಬರಬೇಡಿ ಎಂದು ನಾವು ಹೇಳುವುದಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿಜೆಪಿಗೆ ಮತ ಕೇಳುತ್ತಾರೆ. ಇದರಿಂದ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ "ಎಂದು  ಮುಖ್ಯ ಮಂತ್ರಿ ಅಭಿಪ್ರಾಯಪಟ್ಟರು.

ಪ್ರಧಾನಿ ಮೋದಿ ಕೋಮು ಗಲಭೆ ನಡೆಸುತ್ತಾರೆ ಎಂದು ನಾನು ಹೇಳುವುದಿಲ್ಲ. ಆದರೆ ಅಮಿತ್  ಶಾ ಅವರು ಮೋದಿ ಅವರಂತಲ್ಲ. ಅವರ ತಂತ್ರ  ಕೋಮು ಗಲಭೆ ನಡೆಸುವುದಾಗಿದೆ.  ಅವರು ರಾಜ್ಯಕ್ಕೆ ಬಂದು ಹೋದಾಗಲೆಲ್ಲಾ ಗಲಭೆ ನಡೆದಿದೆ. ಅವರು ಗಲಾಟೆಗೆ ಸೂಚನೆ ನೀಡುತ್ತಾರೆ ಎನ್ನುವುದಕ್ಕೆ ಸಂಸದ ಪ್ರತಾಪ್ ಸಿಂಹ ಹೇಳಿಕೆ ಸಾಕ್ಷಿಯಾಗಿದೆ. ಕೋಮು ಗಲಭೆ ಮಾಡಿಸುವುದೇ ಅಮಿತ್  ಶಾ ಸ್ಟ್ಯಾಂಡರ್ಡ್ ಎಂದು ಗಂಭೀರ ಆರೋಪ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು  ಆದರೆ ನಾವು ಅದಕ್ಕೆ ಅವಕಾಶ ಕೊಡುವುದಿಲ್ಲ . ರಾಜ್ಯದಲ್ಲಿ ಕೋಮುಗಲಭೆ  ಮಾಡುವವರ  ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News