ಮಾಜಿ ಕಾಂಗ್ರೆಸ್ ಮುಖಂಡನಿಗೆ ರಾಜ್ಯಸಭಾ ಟಿಕೆಟ್ ಆಮಿಷ ಒಡ್ಡಿದ ಅಮಿತ್ ಶಾ !

Update: 2018-03-02 04:56 GMT

ಹೊಸದಿಲ್ಲಿ, ಮಾ. 2: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರ ಭೇಟಿ ಹಲವು ಅನುಮಾನಗಳನ್ನು ಹುಟ್ಟಿಸಿದೆ. ಶಾ ತಮಗೆ ರಾಜ್ಯಸಭಾ ಟಿಕೆಟ್ ನೀಡುವ ಭರವಸೆ ನೀಡಿದ್ದಾಗಿ ರಾಣೆ ಹೇಳಿದ್ದಾರೆ.

"ಆದರೆ ನಾನಿನ್ನೂ ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ" ಎಂದು ರಾಣೆ ಸ್ಪಷ್ಟಪಡಿಸಿದ್ದಾರೆ. ಆದರೆ ರಾಣೆ ಅವರ ಹೇಳಿಕೆಯನ್ನು ಬಿಜೆಪಿಯ ಯಾವ ಮುಖಂಡರೂ ಇದುವರೆಗೆ ದೃಢಪಡಿಸಿಲ್ಲ.

"ಎನ್‌ಡಿಎ ಅಭ್ಯರ್ಥಿಯಾಗಿ ರಾಜ್ಯಸಭಾ ಸ್ಥಾನ ಬಯಸುತ್ತೀರಾ ಎಂದು ಶಾ ಕೇಳಿದ್ದಾರೆ. 2019ರ ಲೋಕಸಭಾ ಚುನಾವಣೆ ಬಳಿಕವಷ್ಟೇ ದೆಹಲಿಗೆ ತೆರಳಲು ನಾನು ಬಯಸಿದ್ದೆ. ಶಾ ಅವರ ಕೇಳಿಕೆ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಬೇಕಿದೆ. ಈ ಬಗ್ಗೆ ಯೋಚಿಸಲು ಸ್ವಲ್ಪ ಸಮಯಾವಕಾಶ ಕೇಳಿದ್ದೇನೆ" ಎಂದು ದೆಹಲಿ ಯಿಂದ ಮುಂಬೈಗೆ ವಾಪಸ್ಸಾದ ಬಳಿಕ ಸ್ಪಷ್ಟಪಡಿಸಿದರು.

"ಫಡ್ನವೀಸ್ ಜತೆ ಶಾ ಅವರನ್ನು ಭೇಟಿಯಾಗಿದ್ದೆ. ಆದರೆ ರಾಜ್ಯ ಸಂಪುಟಕ್ಕೆ ಸೇರಿಸಿಕೊಳ್ಳುವಲ್ಲಿ ಕೆಲ ಸಮಸ್ಯೆಗಳಿವೆ ಎಂದು ಫಡ್ನವೀಸ್ ಹೇಳಿದರು. ಇದನ್ನು ಶೀಘ್ರ ಬಗೆಹರಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ನನ್ನದು ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News