ರಥೋತ್ಸವದಲ್ಲಿ ಸಿಲುಕಿದ ಮಾಜಿ ಪ್ರಧಾನಿ ದೇವೇಗೌಡರ ಸಹಾಯಕ್ಕೆ ಬಂದ ಮಗ ರೇವಣ್ಣ

Update: 2018-03-02 09:22 GMT

ಹಾಸನ.ಮಾ.2: ಹೊಳೆನರಸಿಪುರದಲ್ಲಿರುವ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನದ ರಥೋತ್ಸವದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಪತ್ನಿ ಚನ್ನಮ್ಮ ಸಿಲುಕಿಕೊಂಡು ಪರದಾಡಿದ ಘಟನೆ ವರದಿಯಾಗಿದೆ.

ರಥ ಎಳೆಯಲು  ಎಚ್.ಡಿ.ದೇವೇಗೌಡ ಅವರು ಚಾಲನೆ ನೀಡಿದರು. ಆಗ ರಥ ಎಳೆಯುವವರು ಜೋರಾಗಿ ರಥ ಎಳೆದ ಹಿನ್ನೆಲೆಯಲ್ಲಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಮತ್ತು ಅವರ ಪತ್ನಿ ಚನ್ನಮ್ಮ ಸಿಲುಕಿಕೊಂಡು ಹೊರಬರಲು ಹರಸಾಹಸ ನಡೆಸಿದರು. ಆಗ  ಪತ್ನಿ ಜೊತೆ ಅಲ್ಲೆ ಇದ್ದ ಮಗ ರೇವಣ್ಣ ಅವರು ಧಾವಿಸಿ ಬಂದು ಜನರ ಮಧ್ಯೆ ಸಿಲುಕಿದ್ದ ತಂದೆ ಮತ್ತು ತಾಯಿಯನ್ನು  ಬಚಾವ್ ಮಾಡುವಲ್ಲಿ ಯಶಸ್ವಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News