ಟಿಡಿಪಿ ಸಚಿವರ ರಾಜೀನಾಮೆ ಅಂಗೀಕಾರ
ಮುಂಬೈ, ಮಾ. 9: ತೆಲುಗು ದೇಶಂ ಪಕ್ಷದ ಸಂಸದ ಅಶೋಕ್ ಗಜಪತಿ ರಾಜು ಪಶುಪತಿ ಹಾಗೂ ವೈ.ಎಸ್. ಚೌಧರಿ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಕ್ರವಾರ ಅಂಗೀಕರಿಸಿದ್ದಾರೆ.
ಸಚಿವರ ಕೇಂದ್ರ ಮಂಡಳಿಯಲ್ಲಿ ಕೂಡಲೇ ಅಸ್ತಿತ್ವಕ್ಕೆ ಬರುವಂತೆ ರಾಜು ಹಾಗೂ ಚೌಧರಿ ರಾಜೀನಾಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ರಾಷ್ಟ್ರಪತಿ ಅವರು ಅಂಗೀಕರಿಸಿದರು.
ರಾಜು ನಾಗರಿಕ ವಿಮಾನ ಯಾನ ಖಾತೆ ಹಾಗೂ ಚೌಧರಿ ವಿಜ್ಞಾನ, ತಂತ್ರಜ್ಞಾನ ಹಾಗೂ ಭೂವಿಜ್ಞಾನ ಖಾತೆಯ ಸಹಾಯಕ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರಾಜು ರಾಜೀನಾಮೆ ಬಳಿಕ ವಿಮಾನ ಯಾನ ಖಾತೆಯನ್ನು ನೋಡಿಕೊಳ್ಳಲು ರಾಷ್ಟ್ರಪತಿ ಅವರು ಪ್ರಧಾನಿ ಮಂತ್ರಿ ಅವರಿಗೆ ನಿರ್ದೇಶಿಸಿದ್ದಾರೆ.
ಆಂಧ್ರಪ್ರದೇಶಕ್ಕೆ ಪ್ರತ್ಯೇಕ ಸ್ಥಾನ ಮಾನ ನೀಡುವುದಕ್ಕೆ ವಿಫಲವಾದ ಹಿನ್ನೆಲೆಯಲ್ಲಿ ಎನ್ಡಿಎ ಸರಕಾರದ ಇಬ್ಬರು ಟಿಡಿಪಿ ಸಂಸದರು ರಾಜೀನಾಮೆ ಸಲ್ಲಿಸಿದ್ದರು. ಇಬ್ಬರು ಟಿಡಿಪಿ ಸಚಿವರು ಗುರುವಾರ ರಾಜೀನಾಮೆ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದ್ದರು.