ಮೋದಿ ಮುಕ್ತ ಭಾರತಕ್ಕೆ ಕರೆ ನೀಡಿದ ರಾಜ್ ಠಾಕ್ರೆ

Update: 2018-03-19 05:56 GMT

ಮುಂಬೈ, ಮಾ.19: ಕೇಂದ್ರ ಸರಕಾರದ ವಿರುದ್ಧ ತನ್ನ ವಾಗ್ದಾಳಿ ಮುಂದುವರಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ 2019ರ ವೇಳೆಗೆ ಮೋದಿ ಮುಕ್ತ ಭಾರತಕ್ಕೆ ಕರೆ ನೀಡಿದ್ದಾರೆ.

ಕೇಂದ್ರ ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, “ನರೇಂದ್ರ ಮೋದಿ ಹಾಗು ಅವರ ಸರಕಾರದ ಸುಳ್ಳು ಭರವಸೆಗಳಿಂದ ದೇಶವು ಬೇಸತ್ತು ಹೋಗಿದೆ. ಮೋದಿ ಮುಕ್ತ ಭಾರತಕ್ಕೆ ಹಾಗು ಎನ್ ಡಿಎ ಸರಕಾರವನ್ನು ಕಿತ್ತೊಗೆಯಲು ಎಲ್ಲಾ ಪಕ್ಷಗಳು ಒಗ್ಗಟ್ಟಾಗಬೇಕು” ಎಂದವರು ಹೇಳಿದರು,

“1947ರಲ್ಲಿ ಭಾರತಕ್ಕೆ ಮೊದಲ ಸ್ವಾತಂತ್ರ್ಯ ಲಭಿಸಿತು. 1977ರಲ್ಲಿ 2ನೆಯ ಸ್ವಾತಂತ್ರ್ಯ ಲಭಿಸಿತು. 2019ರಲ್ಲಿ ಮೋದಿ ಮುಕ್ತ ಭಾರತದೊಂದಿಗೆ ಭಾರತ ಮೂರನೆ ಬಾರಿ ಸ್ವತಂತ್ರವಾಗಬೇಕಿದೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News