ಜನರ ಸಮಸ್ಯೆ ನಿವಾರಿಸಲು ಚುನಾವಣೆಯಲ್ಲಿ ಸ್ಪರ್ಧೆ: ಹುಚ್ಚ ವೆಂಕಟ್

Update: 2018-04-10 17:10 GMT

ಹಾಸನ,ಎ.10: ಜನರ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲಿ ಸ್ಪರ್ಧೆ ಮಾಡುವುದಾಗಿ ಚಲನಚಿತ್ರ ನಿರ್ದೇಶಕ ಹಾಗೂ ನಟ ಹುಚ್ಚ ವೆಂಕಟ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಮೇ.12ಕ್ಕೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಿಂದ ಈ ಬಾರಿ ಸ್ಪರ್ಧೆ ಮಾಡಲಾಗುವುದು. ಜನರ ಕಷ್ಟಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಇಷ್ಟು ವರ್ಷಗಳ ಕಾಲ ನ್ಯಾಯಕ್ಕಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ. ಜನರು ನನ್ನನ್ನು ಆಶೀರ್ವಾದಿಸಿ ಗೆಲುವು ನೀಡಿದರೆ ಜನರ ಪ್ರತಿನಿಧಿಯಾಗಿ ಕೆಲಸ ಮಾಡುವೆ ಎಂದರು.

ಒಬ್ಬನೇ ಕ್ಷೇತ್ರವನ್ನು ತಿರುಗಿ ಮತಯಾಚನೆ ಮಾಡುತ್ತೇನೆ. ನನ್ನ ಜೊತೆ ಯಾವ ಕಾರ್ಯಕರ್ತರೂ ಇರುವುದಿಲ್ಲ. ಹಣ, ಹೆಂಡ, ಸೀರೆ ಸೇರಿದಂತೆ ಇತರೆ ಯಾವುದೇ ಆಮಿಷವನ್ನು ಜನರಿಗೆ ಒಡ್ಡುವುದಿಲ್ಲ. ನಾ ಮಾಡಿರುವ ಕೆಲಸಕ್ಕೆ ಜನರು ನಂಬಿಕೆ ಇಟ್ಟು ಮತ ನನಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಒಂದು ಬಾರಿ ಪ್ರಧಾನಿ ಆಗೇ ಆಗುತ್ತೇನೆ ಎಂದ ಅವರು ಪೂರ್ವಭಾವಿಯಾಗಿ ಈಗ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ದಿಸುತ್ತಿರುವುದಾಗಿ ಹೇಳಿದರು. ಈ ಸಮಯಲ್ಲಿ ಇತರೆ ಪಕ್ಷಗಳು ಆಹ್ವಾನಿಸಿದರೂ ನಾನು ರಾಷ್ಟ್ರೀಯ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ಹಾಗೆಯೇ ಯಾವುದೇ ಬೆಂಬಲವನ್ನು ಅವರಿಗೆ ಕೊಡುವುದಿಲ್ಲ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News