ಮಣಿಪುರದಲ್ಲಿ ನಕಲಿ ಎನ್‌ಕೌಂಟರ್ : ಸೇನಾಧಿಕಾರಿ ವಿರುದ್ಧ ಸಿಬಿಐಯಿಂದ ಪ್ರಕರಣ ದಾಖಲು

Update: 2018-08-03 04:20 GMT

ಹೊಸದಿಲ್ಲಿ, ಆ. 2: ಮಣಿಪುರದಲ್ಲಿ ಕಾನೂನು ಬಾಹಿರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಸೇನಾಧಿಕಾರಿ ಹಾಗೂ ಇತರ ಏಳು ಮಂದಿ ವಿರುದ್ಧ ಗುರುವಾರ ಪ್ರಕರಣ ದಾಖಲಿಸಿದೆ. 12 ವರ್ಷದ ಬಾಲಕನ ಕಾನೂನು ಬಾಹಿರ ಹತ್ಯೆಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಅಸ್ಸಾಂ ರೈಫಲ್ಸ್‌ನ ಮೇಜರ್ ವಿಜಯ್ ಸಿಂಗ್ ಬಲ್ಹಾರಾ ಹಾಗೂ ಇತರ 7 ಯೋಧರ ಹೆಸರು ಉಲ್ಲೇಖಿಸಲಾಗಿದೆ. ಹತ್ಯೆಗೆ ಸಂಬಂಧಿಸಿದ ಐಪಿಸಿ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸುಪ್ರೀಂ ಕೋರ್ಟ್ ನಿಯೋಜಿತ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೇತೃತ್ವದ ನಿಯೋಗ ಬಾಲಕನ ಹತ್ಯೆ ಪ್ರಕರಣವನ್ನು ನಕಲಿ ಎನ್‌ಕೌಂಟರ್ ಎಂದು ವ್ಯಾಖ್ಯಾನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News