ಪರಮಾನಂದ ಭಾರತೀ ಸ್ವಾಮಿ ನಿಧನ

Update: 2019-07-29 17:40 GMT

ಬೆಂಗಳೂರು, ಜು.28: ಶಂಕರ ಪರಂಪರೆಯ ಸನ್ಯಾಸಿ ಪರಮಾನಂದ ಭಾರತೀ ಸ್ವಾಮಿ ಅವರು ಬೆಂಗಳೂರಿನಲ್ಲಿ ನಿಧನರಾದರು.

ರವಿವಾರ ತಡರಾತ್ರಿ 1:30ಕ್ಕೆ ನಿಧನರಾಗಿದ್ದು, ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪದ ರಾಮಾಶ್ರಮದಲ್ಲಿ ಇಂದು ಸಂಜೆ ಅಂತಿಮ ವಿಧಿವಿಧಾನ ನಡೆದವು ಎಂದು ಹೇಳಲಾಗುತ್ತಿದೆ.

ವಿಜ್ಞಾನ ಮತ್ತು ವೇದಾಂತದ ಸಮನ್ವಯದಲ್ಲಿ ಭಾರತೀಯ ತತ್ವಶಾಸ್ತ್ರದ ಪ್ರಮೇಯಗಳನ್ನು ಕುರಿತು ಅವರು ನೀಡುತ್ತಿದ್ದ ಪ್ರವಚನಗಳು ಸಾವಿರಾರು ಜನರನ್ನು ಸೆಳೆದಿದ್ದವು. ಪೂರ್ವಾಶ್ರಮದಲ್ಲಿ ಮದ್ರಾಸ್ ಐಐಟಿಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಪರಮಾನಂದ ಭಾರತೀ ಅವರು ಶಂಕರ ತತ್ವ ಸಂದೇಶಗಳ ಪ್ರಭಾವದಿಂದ ಸನ್ಯಾಸ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News