ಬಂಡೀಪುರದಲ್ಲಿ ಸಫಾರಿ ವಾಹನದ ಮೇಲೆ ಆನೆ ದಾಳಿ

Update: 2019-07-31 19:01 GMT

ಚಾಮರಾಜನಗರ, ಜು.31: ಸಫಾರಿ ವಾಹನದ ಮೇಲೆ ಆನೆಯೊಂದು ದಾಳಿ ನಡೆಸಿ ವಾಹನದ ಗಾಜನ್ನು ಪುಡಿಗಟ್ಟಿದ್ದು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ಸಫಾರಿ ಝೋನ್‍ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಫಾರಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಆನೆ ವಾಹನವನ್ನು ಗುದ್ದಿ ಗಾಜನ್ನು ಪುಡಿಗಟ್ಟಿದೆ. ಇದರಿಂದ ಕೆಲಕಾಲ ಪ್ರವಾಸಿಗರು ಆತಂಕಕ್ಕೆ ಒಳಗಾಗಿದ್ದಾರೆ. ನಂತರ ಅರಣ್ಯ ಸಿಬ್ಬಂದಿ ಕಾಡಿನ ಹಕ್ಕಿಯಂತೆ ಕೂಗಿ ಆನೆಯನ್ನು ಓಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News