ವಿಷಪೂರಿತ ಬೇಲಿ ಕಾಯಿ ತಿಂದು ಹದಿನಾಲ್ಕು ಮಕ್ಕಳು ಸೇರಿ 18 ಮಂದಿ ಅಸ್ವಸ್ಥ

Update: 2019-08-04 17:31 GMT

ಮಂಡ್ಯ, ಆ.4: ವಿಷಪೂರಿತ ಬೇಲಿ ಕಾಯಿ ತಿಂದು ಒಂದೇ ಗ್ರಾಮದ 14 ಮಕ್ಕಳು ಹಾಗೂ ನಾಲ್ವರು ಹಿರಿಯರು ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಬೇಲಿಯಲ್ಲಿ ಬಿಡುವ ಕಾಚಳ್ಳಿ ಕಾಯಿ ತಿಂದು ಚಿರಂತ್ (14), ದಿಗಂತ್ (9), ಶ್ರೇಯಾ (6), ತರುಣ (10), ವರ್ಷಮ್ (11), ಅಜಿತ್ (10), ರೋಜಾ (11), ಶರುಣ (5), ಜನಿತ್ (9), ದರ್ಶನ್ (16), ಚೇತನ್ (16), ಯಶ್ವಂತ್ (12), ಶಿವ (36), ಮರಿಯಯ್ಯ (70), ವೆಂಕಟೇಶ್ (65), ಗೌರಮ್ಮ (38), ಸಿಂಚನ (16), ಮರಿನಿಂಗಯ್ಯ (55) ಎಂಬವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ತೀವ್ರ ವಾಂತಿಯಿಂದ ಅಸ್ವಸ್ಥಗೊಂಡಿರುವ ಮಕ್ಕಳನ್ನು ಹಾಗೂ ಹಿರಿಯರನ್ನು ಮೈಸೂರಿನ ಚಲುವಾಂಬ ಆಸ್ಪತ್ರೆಗೆ ರವಾನೆ‌‌ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News