ಕೊಡಗಿನಲ್ಲಿ ಭೂ ಕುಸಿತ :4 ಸಾವು

Update: 2019-08-09 08:57 GMT

ಮಡಿಕೇರಿ, ಆ.9: ಕೊಡಗಿನಲ್ಲಿ  ಮತ್ತೆ ಮಳೆಯ ಆರ್ಭಟ ಮುಂದುವರಿದಿದ್ದು, ಭಾಗಂಡಲ ಸಮೀಪದ ಕೊರಂಗಾಲದಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ಮಣ್ಣಿನಡಿಗೆ ಸಿಲುಕಿ ನಾಲ್ವರು  ಮೃತಪಟ್ಟಿದ್ದಾರೆ. ಓರ್ವ  ಮಣ್ಣಿನಡಿಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಒಟ್ಟು ಐವರು ಗುಡ್ಡಕುಸಿತದಿಂದ ಮಣ್ಣನಡಿ ಸಿಲುಕಿದ್ದಾರೆ. ಈ ಪೈಕಿ ನಾಲ್ವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕೊಡಗಿನ 14 ಕಡೆಗಳಲ್ಲಿ ಭೂ ಕುಸಿತ ಸಂಭವಿಸಿದೆ.

ವರುಣನ  ಆರ್ಭಟಕ್ಕೆ ಮಲೆನಾಡು ತತ್ತರಿಸಿದ್ದು, ಶಿವಮೊಗ್ಗ ನಗರ ಸಂಫೂರ್ಣ  ಜಲಾವೃತಗೊಂಡಿದೆ.  ಜೋಗ ಜಲಪಾತದ ಪಕ್ಕದ ಪುರಾತನ 'ಬಾಂಬೆ ಬಂಗ್ಲೋ '  ಇರುವ ಗುಡ್ಡ ಕುಸಿದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News