'ಕಂಬಳಿ ಕೇಳಿದರೆ, ಕರ್ಚೀಫ್ ಭಿಕ್ಷೆ ನೀಡಿದ್ದಾರೆ': ಕೇಂದ್ರ ಸರಕಾರದ ವಿರುದ್ಧ ಪ್ರಕಾಶ್ ರಾಜ್ ಆಕ್ರೋಶ

Update: 2019-10-06 13:09 GMT

ಬೆಂಗಳೂರು, ಅ.6: ನೆರೆ ಸಂತ್ರಸ್ತರಿಗೆ ಕೇಂದ್ರ ಸರಕಾರ 1200 ಕೋಟಿ ರೂಪಾಯಿ ಬಿಡುಗಡೆ ಸಂಬಂಧಪಟ್ಟಂತೆ ಹೊದ್ಕೊಳ್ಳೊಕೆ ಕಂಬಳಿ ಕೇಳಿದರೆ, ಕರ್ಚೀಫ್ ಭಿಕ್ಷೆ ನೀಡಿದ್ದಾರೆ ಎಂದು ಚಿಂತಕ, ಬಹುಭಾಷಾ ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ಈ ಕುರಿತು ಟ್ವಿಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಹೊದ್ಕೊಳ್ಳೊಕೆ ಕಂಬಳಿ ಕೇಳಿದರೆ, ಕರ್ಚೀಫ್ ಭಿಕ್ಷೆ ಕೊಟ್ಟು ಬೀಗುತ್ತಾ ಇದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಸಣ್ಣ ಮೊತ್ತದ ಪರಿಹಾರಕ್ಕೆ ಪ್ರಜೆಗಳೆ ಮರುಳಾಗದಿರಿ, ದೇಶದ ದುಡ್ಡು, ನಮ್ಮ ಸಂಕಷ್ಟದಲ್ಲಿ ಪಕ್ಷಾತೀತರಾಗಿರಿ ಪ್ರಶ್ನಿಸೋದನ್ನು ನಿಲ್ಲಿಸಬೇಡಿ. ಯಾರೇ ಆದರೂ, ನಾವು ಉಗೀತಿದ್ರೇನೆ ಕೆಲಸ ಮಾಡುವುದು ಅಲ್ವಾ? ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News