ಗವಿಸಿದ್ಧ ಎನ್.ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಟೆಲೆಕ್ಸ್ ರವಿಕುಮಾರ್ ಆಯ್ಕೆ

Update: 2019-10-14 17:12 GMT

ಕೊಪ್ಪಳ, ಅ.14: ಖ್ಯಾತ ಸಾಹಿತಿ ನಾಡಕವಿ ಗವಿಸಿದ್ಧ ಎನ್.ಬಳ್ಳಾರಿ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿಗೆ ಶಿವಮೊಗ್ಗದ ಲೇಖಕ ಹಾಗೂ ಪತ್ರಕರ್ತ ಎನ್.ರವಿಕುಮಾರ್ (ಟೆಲೆಕ್ಸ್) ಅವರು ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 5 ಸಾವಿರ ರೂ.ನಗದು, ಬೆಳ್ಳಿ ಪದಕವನ್ನು ಒಳಗೊಂಡಿದ್ದು, ಅ.20 ರಂದು ಕೊಪ್ಪಳದ ಸರಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ನಡೆಯುವ ‘ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ’ ಸಮಾರಂಭದಲ್ಲಿ ಚಿಂತಕ ಡಾ.ಸರಜೂ ಕಾಟ್ಕರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಗವಿಸಿದ್ಧ ಬಳ್ಳಾರಿ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿಗಳನ್ನು ಆಹ್ವಾನಿಸಿತ್ತು. ಈ ಬಾರಿ ಕಾವ್ಯ ಪ್ರಶಸ್ತಿಗೆ ಒಟ್ಟು 26 ಹಸ್ತಪ್ರತಿಗಳು ಬಂದಿದ್ದವು. ಆ ಪೈಕಿ ಶಿವಮೊಗ್ಗದ ರವಿಕುಮಾರ್ (ಟೆಲೆಕ್ಸೃ್) ಅವರ ‘ನೆರ್ಕೆ ಗೋಡೆಯ ರತ್ನಪಕ್ಷಿ’ ಹಸ್ತಪ್ರತಿಯು 2019ರ ನಾಡಕವಿ ಗವಿಸಿದ್ಧ ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ ಬಳ್ಳಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News