ಭಗತ್ ಸಿಂಗ್‌ಗೆ ಭಾರತರತ್ನ ನೀಡಿ: ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಪ್ರಧಾನಿಗೆ ಪತ್ರ

Update: 2019-10-26 06:20 GMT

ಹೊಸದಿಲ್ಲಿ,ಅ.26: ಭಾರತದ ಉನ್ನತ ನಾಗರಿಕ ಗೌರವ ‘ಭಾರತರತ್ನ’ವನ್ನು ಸ್ವಾತಂತ್ರ ಹೋರಾಟಗಾರರಾದ ಭಗತ್ ಸಿಂಗ್, ರಾಜ್‌ಗುರು ಹಾಗೂ ಸುಖ್‌ದೇವ್‌ಗೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ನ ಲೋಕಸಭಾ ಸಂಸದ ಮನೋಜ್ ತಿವಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

 ಭಗತ್ ಸಿಂಗ್, ರಾಜ್‌ಗುರು ಹಾಗೂ ಸುಖ್‌ದೇವ್ ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ನಿರಂತರವಾಗಿ ವಿರೋಧಿಸುವ ಮೂಲಕ, 1931ರ ಮಾರ್ಚ್ 23ರಂದು ಸರ್ವೋಚ್ಛ ತ್ಯಾಗದಿಂದ ಇಡೀ ತಲೆಮಾರಿನ ದೇಶಭಕ್ತರಿಗೆ ಸ್ಫೂರ್ತಿ ನೀಡಿದ್ದಾರೆ ಎಂಬ ಅಂಶದತ್ತ ನಿಮ್ಮ ಗಮನ ಸೆಳೆಯಲು ನಾನು ಬಯಸಿದ್ದೇನೆ. 2020ರ ಜನವರಿ 26ರಂದು ಈ ಮೂವರಿಗೆ ‘ಭಾರತ ರತ್ನ’ ಗೌರವ ನೀಡಬೇಕು ಎಂದು ಅಕ್ಟೋಬರ್ 25ರಂದು ಪ್ರಧಾನಿಗೆ ಬರೆದ ಪತ್ರದಲ್ಲಿ ತಿವಾರಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News