ಶರದ್ ಪವಾರ್ ರನ್ನು ಭೇಟಿಯಾದ ಸಂಜಯ್ ರಾವತ್: ಕುತೂಹಲ ಸೃಷ್ಟಿಸಿದ ಶಿವಸೇನೆ ನಾಯಕನ ನಡೆ

Update: 2019-10-31 15:58 GMT

ಹೊಸದಿಲ್ಲಿ: ಬಿಜೆಪಿ ಜೊತೆಗಿನ ಅಧಿಕಾರ ಹಂಚಿಕೆ ತಿಕ್ಕಾಟ ಇನ್ನೂ ಮುಂದುವರಿದಿರುವಂತೆಯೇ ಶಿವಸೇನೆಯ ನಾಯಕ ಸಂಜಯ್ ರಾವತ್ ನ್ಯಾಶನಲ್ ಕಾಂಗ್ರೆಸ್ ಪಕ್ಷ (ಎನ್ ಸಿಪಿ)ದ ನಾಯಕ ಶರದ್ ಪವಾರ್ ರನ್ನು ಭೇಟಿಯಾಗಿದ್ದಾರೆ.

ದೀಪಾವಳಿ ಹಿನ್ನೆಲೆಯಲ್ಲಿ ನಡೆದ ಸಾಮಾನ್ಯ ಭೇಟಿ ಇದಾಗಿದೆ ಎಂದು ರಾವತ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಂದು ಆದಿತ್ಯ ಠಾಕ್ರೆಯವರು ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾಗಿದ್ದು, ರಾಜ್ಯದ ರೈತರ ಸಮಸ್ಯೆಯ ಬಗ್ಗೆ ಚರ್ಚಿಸಲು ಈ ಭೇಟಿಯೇ ಹೊರತು ಸರಕಾರ ಸ್ಥಾಪನೆ ವಿಚಾರದಲ್ಲಲ್ಲ ಎಂದು ಆದಿತ್ಯ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News