ಬರ, ಪ್ರವಾಹ ಇರುವಾಗ ವಿದೇಶಿ ಪ್ರವಾಸ ಹೋಗಲ್ಲ: ಬಸವರಾಜ​ ಹೊರಟ್ಟಿ

Update: 2019-11-01 17:26 GMT

ಹುಬ್ಬಳ್ಳಿ, ನ.1: ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರ ಹಾಗೂ ಪ್ರವಾಹ ಬಂದಿದ್ದು, ಇಂತಹ ವೇಳೆಯಲ್ಲಿ ನಾನು ವಿದೇಶ ಪ್ರವಾಸ ಮಾಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಪಕ್ಷದವರು ವಿದೇಶ ಪ್ರವಾಸಕ್ಕೆ ಹೋಗುವುದರ ಬಗ್ಗೆ ತಮಗೆ ಗೊತ್ತಿಲ್ಲ. ಆದರೆ, ನಾನಂತೂ ಹೋಗುತ್ತಿಲ್ಲ. ಬರ ಹಾಗೂ ಪ್ರವಾಹದ ಸಮಸ್ಯೆಯನ್ನು ಬಗೆಹರಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರ ವಿಚಾರಕ್ಕೆ ಸಂಬಂಧಿಸಿದಂತೆ ಎಚ್‌ಡಿಕೆ, ಎಚ್.ಡಿ.ರೇವಣ್ಣ ಮೊದ ಮೊದಲು ಅಟ್ಟಕ್ಕೆ ಏರಿಸುತ್ತಾರೆ. ಬಳಿಕ ಅಂತಹ ವಿಚಾರಗಳಲ್ಲಿ ನಿರ್ಲಕ್ಷ್ಯ ತೋರಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡ ರಾಜ್ಯೋತ್ಸವ ಸಮಯದಲ್ಲಿ ಧ್ವಜದ ಬಗ್ಗೆ ಹಿಂದಿನ ಸರಕಾರ ತೆಗೆದುಕೊಂಡ ನಿರ್ಧಾರವನ್ನು ಈಗಿನ ಬಿಜೆಪಿ ಸರಕಾರ ಮುಂದುವರಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News