ಸಚಿವರ ಪುನರ್ ಪರಿಶೀಲನಾ ಸಭೆ ಕರೆದ ಪ್ರಧಾನಿ

Update: 2019-12-19 19:11 GMT

ಹೊಸದಿಲ್ಲಿ, ಡಿ. 19: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕರೆದ ಸಚಿವರ ಸಭೆಯಲ್ಲಿ ಸಾಮಾಜಿಕ ವಲಯದ ಪ್ರಗತಿ, ಕಲ್ಯಾಣ ಯೋಜನೆಗಳ ಅಗತ್ಯ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಈ ಬೆಳವಣಿಗೆ ಬಗ್ಗೆ ಅರಿವಿರುವ ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ವಲಯಗಳಲ್ಲಿ ಯೋಜನೆಗಳನ್ನು ಸಿದ್ಧಪಡಿಸಲು ಮೋದಿ ಅವರ ಮೊದಲ ಆಡಳಿತಾವಧಿಯಲ್ಲಿ ರೂಪಿಸಲಾದ ವಿವಿಧ ಕಾರ್ಯದರ್ಶಿಗಳ ಗುಂಪಿನ ವರದಿ ಈ ಸಭೆಯಲ್ಲಿ ಚರ್ಚೆಗೆ ಬರುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಮುಖ ವಿಷಯಗಳಲ್ಲಿ ನೀತಿಗಳ ಸ್ವರೂಪವೇನು ಎಂಬುದನ್ನು ಈ ಸಭೆ ಸೂಚಿಸಲಿದೆ ಎಂದು ಅವರು ಹೇಳಿದ್ದಾರೆ. ವಿವಿಧ ಸಚಿವಾಲಯಗಳು ತಮ್ಮ ಪ್ರಮುಖ ನಿರ್ಧಾರಗಳನ್ನು ಮಂಡಿಸಲಿವೆ ಹಾಗೂ ಕೃಷಿ, ಗ್ರಾಮೀಣ ಅಭಿವೃದ್ಧಿ ಹಾಗೂ ಸಾಮಾಜಿಕ ವಲಯಗಳ ಬಗ್ಗೆ ಗಮನ ಹರಿಸಲಿವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News