'ಮನುಷ್ಯನಾಗಿರುವುದೇ ಆತನ ಅಪರಾಧ': ಗಾಯಾಳು ಜಾಮಿಯಾ ವಿದ್ಯಾರ್ಥಿ ಬೆಂಬಲಕ್ಕೆ ನಿಂತ ಹರ್ಭಜನ್ ಸಿಂಗ್

Update: 2019-12-20 10:41 GMT

ಹೊಸದಿಲ್ಲಿ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ಗ್ರಂಥಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಮಿನಾಜುದ್ದೀನ್ ಪೊಲೀಸ್ ದೌರ್ಜನ್ಯದಿಂದ ತನ್ನ ಒಂದು ಕಣ್ಣು ಕಳೆದುಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ 'ಮನುಷ್ಯನಾಗಿರುವುದೇ ಆತನ ಅಪರಾಧ ಎಂದಿದ್ದಾರೆ.

ವಿದ್ಯಾರ್ಥಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ ಅವರು "ಮನುಷ್ಯನಾಗಿರುವುದೇ ಆತನ ಅಪರಾಧವಾಗಿದೆ. ಆತ ಅನುಭವಿಸಿದ ಯಾತನೆ ಬಗ್ಗೆ ಕೇಳಿ ಬೇಸರವಾಗಿದೆ. ದಿಲ್ಲಿಯಲ್ಲಿ ನಡೆಯುತ್ತಿರುವುದು ನಿಲ್ಲಬೇಕು'' ಎಂದು ಬರೆದಿದ್ದಾರೆ.

ಇದಕ್ಕೂ ಮುಂಚೆ ಇನ್ನೊಬ್ಬ ಕ್ರಿಕೆಟಿಗ ಇರ್ಫಾನ್ ಪಠಾನ್ ಕೂಡ ಟ್ವೀಟ್ ಮಾಡಿ ``ರಾಜಕೀಯ ಆರೋಪ ಪ್ರತ್ಯಾರೋಪ ಸದಾ ಮುಂದುವರಿಯುವುದು. ಆದರೆ ನಾನು ಮತ್ತು ನಮ್ಮ ದೇಶಕ್ಕೆ ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯಿದೆ" ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News