ಮಹಾರಾಷ್ಟ್ರದಿಂದ ವಾಪಸಾಗಿದ್ದ ಉತ್ತರಪ್ರದೇಶದ ಏಳು ವಲಸಿಗ ಕಾರ್ಮಿಕರಿಗೆ ಕೋವಿಡ್-19

Update: 2020-05-02 07:45 GMT

 ಲಕ್ನೊ, ಮೇ 2: ದೇಶಾದ್ಯಂತ ಲಾಕ್‌ಡೌನ್ ನಡುವೆ ಅಲ್ಲಲ್ಲಿ ಸಿಲುಕಿರುವ ವಲಸಿಗರು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಊರುಗಳಿಗೆ ವಾಪಸಾಗಲು ಕೇಂದ್ರ ಸರಕಾರ ಅನುವು ಮಾಡಿಕೊಟ್ಟ ಮರುದಿನವೇ ಮಹಾರಾಷ್ಟ್ರದಿಂದ ಇತ್ತೀಚೆಗೆ ಉತ್ತರಪ್ರದೇಶಕ್ಕೆ ವಾಪಸಾಗಿದ್ದ ಏಳು ದಿನಗೂಲಿ ಕಾರ್ಮಿಕರಿಗೆ ಕೋವಿಡ್-19 ವೈರಸ್ ಇರುವುದು ದೃಢಪಟ್ಟಿದೆ.

ಈ ವಾರಾರಂಭದಲ್ಲಿ ವಾಪಸಾಗಿದ್ದ ಉತ್ತರಪ್ರದೇಶದ ಬಸ್ತಿ ಜಿಲ್ಲೆಯ ಕಾರ್ಮಿಕರನ್ನು ಕಾಲೇಜೊಂದರಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದರು. ಇದೀಗ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕ್ವಾರಂಟೈನ್ ಸೆಂಟರ್‌ನ್ನು ಸ್ಯಾನಿಟೈಸ್‌ನಿಂದ ಸ್ವಚ್ಛಗೊಳಿಸಲಾಗಿದೆ. ಈ ಕಾರ್ಮಿಕರ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವ ಕೆಲಸ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News