ಇರ್ಫಾನ್ ಖಾನ್, ರಿಷಿ ಕಪೂರ್ ಗೆ ಬೆಂಗಳೂರಿನ ಕಲಾವಿದನ ವಿಶಿಷ್ಟ ನಮನ: ವಿಡಿಯೋ ವೈರಲ್
ಹೊಸದಿಲ್ಲಿ: ಇತ್ತೀಚೆಗೆ ನಿಧನರಾದ ಇಬ್ಬರು ಬಾಲಿವುಡ್ ನಟರಾದ ಇರ್ಫಾನ್ ಖಾನ್ ಹಾಗೂ ರಿಷಿ ಕಪೂರ್ ಅವರಿಗೆ ಬೆಂಗಳೂರಿನ ಖ್ಯಾತ ಕಲಾವಿದರೊಬ್ಬರು ತಮ್ಮ ವಿಶಿಷ್ಟ ಕಲಾಕೃತಿ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದು, ಈ ಕಲಾಕೃತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಲಾವಿದ ಬಾದಲ್ ನಂಜುಂಡಸ್ವಾಮಿ ತಮ್ಮ ಈ ಕಲಾಕೃತಿಯ ವೀಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿ ಹಿರಿಯ ನಟರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ವೀಡಿಯೋದಲ್ಲಿ ಸ್ವಾಮಿ ಅವರು ರಚಿಸಿದ ರಿಷಿ ಕಪೂರ್ ಚಿತ್ರ ಕಾಣಿಸುತ್ತದೆ. ಕ್ಯಾಮರಾ ಈ ಚಿತ್ರದ ಇನ್ನೊಂದು ಕೋನಕ್ಕೆ ತಿರುಗಿದಾಗ ಅದು ಇರ್ಫಾನ್ ಖಾನ್ ಕಲಾಕೃತಿಯಾಗಿ ಮಾರ್ಪಾಟಾಗುತ್ತದೆ.
ಸಾವಿರಾರು ಟ್ವಿಟ್ಟರಿಗರು ಈ ಕಲಾಕೃತಿಯನ್ನು ಲೈಕ್ ಮಾಡಿ ಶೇರ್ ಮಾಡಿದ್ದಾರೆ ಹಾಗೂ ಬಾದಲ್ ನಂಜುಂಡಸ್ವಾಮಿ ಅವರ ಪ್ರತಿಭೆಗೆ ಹ್ಯಾಟ್ಸ್ ಆಫ್ ಎಂದಿದ್ದಾರೆ.
Bengaluru-based artist Baadal Nanjundaswamy pays an artistic tribute to #IrrfanKhan and #RishiKapoor https://t.co/CoU3WldyLX
— Ralph Alex Arakal (@ralpharakal) May 3, 2020