ಗಲ್ವಾನ್ ಘರ್ಷಣೆ: ಹಿಮಾಚಲ ಪ್ರದೇಶದ ಶಾಲೆಗೆ ಹುತಾತ್ಮ ಯೋಧನ ಹೆಸರು

Update: 2020-06-20 15:02 GMT
ಫೋಟೊ ಕೃಪೆ: ಟ್ವಿಟರ್

ಹಮೀರ್‌ಪುರ,ಜೂ.20: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಿ ಸೈನಿಕರೊಂದಿಗೆ ಘರ್ಷಣೆಯಲ್ಲಿ ಹುತಾತ್ಮರಾಗಿರುವ ಯೋಧ ಅಂಕುಶ ಠಾಕೂರ್ ಅವರ ಹೆಸರನ್ನು ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಸರಕಾರಿ ಶಾಲೆಯೊಂದಕ್ಕೆ ಇಡಲಾಗುವುದು ಎಂದು ಮುಖ್ಯಮಂತ್ರಿ ಜೈರಾಮ ಠಾಕೂರ್ ಅವರು ಪ್ರಕಟಿಸಿದ್ದಾರೆ.

ಶುಕ್ರವಾರ ಕರೋಹ್ತಾ ಗ್ರಾಮದಲ್ಲಿರುವ ಹುತಾತ್ಮ ಯೋಧನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಠಾಕೂರ್,ಕುಟುಂಬಕ್ಕೆ 20 ಲ.ರೂ.ಗಳ ಆರ್ಥಿಕ ನೆರವನ್ನೂ ಘೋಷಿಸಿದರು.

ದೇಶಕ್ಕೆ ತನ್ನ ಸೇನೆ ಮತ್ತು ಗಡಿಗಳನ್ನು ರಕ್ಷಿಸುತ್ತಿರುವ ವೀರಯೋಧರ ಬಗ್ಗೆ ಹೆಮ್ಮೆಯಿದೆ ಎಂದು ಅವರು ನುಡಿದರು.

ಯೋಧ ಠಾಕೂರ್ ಪ್ರತಿಮೆಯನ್ನು ಅವರ ಸ್ವಗ್ರಾಮದಲ್ಲಿ ಸ್ಥಾಪಿಸಲಾಗುವುದು ಎಂದು ಸ್ಥಳೀಯ ಶಾಸಕರು ಈ ಸಂದರ್ಭದಲ್ಲಿ ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News