ಕರ್ನಾಟಕ ರಾಜ್ಯಸಭಾ ಸ್ಥಾನಕ್ಕೆ ಡಿ.1ರಂದು ಉಪ ಚುನಾವಣೆ
Update: 2020-11-02 14:49 GMT
ಹೊಸದಿಲ್ಲಿ, ನ. 2: ಕೊರೋನ ಸೋಂಕಿನಿಂದ ಸೆಪ್ಟಂಬರ್ 17ರಂದು ಸಂಸದ ಅಶೋಕ್ ಗಸ್ತಿ ನಿಧನರಾದ ಹಿನ್ನೆಲೆಯಲ್ಲಿ ತೆರವಾದ ಕರ್ನಾಟಕದ ರಾಜ್ಯಸಭಾ ಸ್ಥಾನಕ್ಕೆ ಉಪ ಚುನಾವಣೆಯ ವೇಳಾ ಪಟ್ಟಿಯನ್ನು ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ.
ವೇಳಾಪಟ್ಟಿಯ ಪ್ರಕಾರ ಮತದಾನ ಹಾಗೂ ಮತ ಎಣಿಕೆ ಡಿಸೆಂಬರ್ 1ರಂದು ನಡೆಯಲಿದೆ. ಬಿಜೆಪಿ ನಾಯಕ ಅಶೋಕ್ ಗಸ್ತಿ ಅವರು ಜುಲೈಯಲ್ಲಿ ಮೊದಲ ಬಾರಿಗೆ ರಾಜ್ಯ ಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಕೊರೋನ ಸೋಂಕಿನಿಂದ ಅವರಿಗೆ ಸಂಸತ್ತಿನ ಯಾವುದೇ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.