ನಿತೀಶ್ ಕುಮಾರ್ ಮತ್ತೆ ಬಿಹಾರದ ಸಿಎಂ ಆಗುವುದನ್ನು ಪ್ರಶ್ನಿಸಿದ ಆರ್‌ಜೆಡಿ ನಾಯಕ

Update: 2020-11-12 16:04 GMT

ಪಾಟ್ನಾ,ನ.12: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಗುರುವಾರ ದಾಳಿ ನಡೆಸಿದ ಆರ್‌ಜೆಡಿ ನಾಯಕ ಮನೋಜ್ ಝಾ,ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷದ ಗಳಿಕೆ ಗಣನೀಯವಾಗಿ ಕುಸಿದಿದ್ದರೂ ಅವರು ಮತ್ತೆ ಮುಖ್ಯಮಂತ್ರಿ ಹುದ್ದೆಗೇರಲು ಸಜ್ಜಾಗಿದ್ದಾರೆ ಎಂದು ಟೀಕಿಸಿದರು.

 ‘ನಿಜಕ್ಕೂ ಜನರೇ ಮಾಲಿಕರು, ಆದರೆ ಅವರು ನಿಮ್ಮನ್ನು (ನಿತೀಶ್) ಯಾವ ಸ್ಥಿತಿಯಲ್ಲಿ ಸಿಲುಕಿಸಿದ್ದಾರೆ ನೋಡಿ. ಕೇವಲ 40 ಸ್ಥಾನಗಳನ್ನು ಗಳಿಸಿರುವ ನೀವು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದೀರಿ. ಜನಾದೇಶವನ್ನು ನೀವು ವಿಶ್ಲೇಷಿಸಿದರೆ ಅದು ನಿರ್ಣಾಯಕವಾಗಿ ನಿಮ್ಮ ವಿರುದ್ಧವೇ ಆಗಿದೆ. ಹಾಗಿದ್ದರೂ ನೀವು ಮುಖ್ಯಮಂತ್ರಿ ಗಾದಿಗೇರಿದರೆ ಅದು ಎಷ್ಟು ದಿನ ಉಳಿಯಲಿದೆ ಎನ್ನುವುದು ದೇವರಿಗೆ ಮಾತ್ರ ಗೊತ್ತು ’ ಎಂದು ಝಾ ಛೇಡಿಸಿದ್ದಾರೆ.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳನ್ನು ಟ್ವೀಟಿಸಿದ್ದ ನಿತೀಶ್, ಜನರನ್ನು ‘ಮಾಲಿಕರು’ ಎಂದು ಪ್ರಸ್ತಾಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News