ಟಿಆರ್ ಪಿ ತಿರುಚಿದ ಪ್ರಕರಣ: ರಿಪಬ್ಲಿಕ್ ಟಿವಿ ಸಿಇಒ ಬಂಧನ

Update: 2020-12-13 05:30 GMT

ಮುಂಬೈ: ಟಿವಿ ರೇಟಿಂಗ್ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿ ರಿಪಬ್ಲಿಕ್ ಟಿವಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ವಿಕಾಸ್ ಖಾಂಚಂದಾನಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾದ 13ನೇ ವ್ಯಕ್ತಿ ಇವರಾಗಿದ್ದಾರೆ.

ಮುಂಬೈ ಪೊಲೀಸರು ಅಕ್ಟೋಬರ್ 6 ರಂದು ಎಫ್‌ಐಆರ್ ದಾಖಲಿಸಿದ್ದರು. ಹಂಸ ರಿಸರ್ಚ್ ಅಧಿಕಾರಿ ನಿತಿನ್ ದೇವೊಕರ್ ದೂರು ಸಲ್ಲಿಸಿದ ಬಳಿಕ ತನಿಖೆಯನ್ನು ಆರಂಭಿಸಿದ್ದರು.

ದಾಖಲೆಯಲ್ಲಿ 140 ಸಾಕ್ಷಿಗಳನ್ನು ಹೆಸರಿಸಲಾಗಿದ್ದು, ಇದರಲ್ಲಿ ಫೊರೆನ್ಸಿಕ್ ಆಡಿಟರ್‌ಗಳು ಹಾಗೂ ಟಿಆರ್‌ಪಿಯನ್ನು ಪರಿಶೀಲಿಸುವ ಬಾರ್ಕ್ ಸದಸ್ಯರು ಕೂಡ ಇದರಲ್ಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News