ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿ ಶ್ರೀಕಾಂತ್ ಕೋವಿಡ್-19ನಿಂದಾಗಿ ನಿಧನ

Update: 2020-12-15 09:05 GMT

ಹೊಸದಿಲ್ಲಿ: ಭಾರತೀಯ ನೌಕಾಪಡೆಯ ಹಿರಿಯ ಜಲಾಂತರ್ಗಾಮಿ ವೈಸ್ ಅಡ್ಮಿರಲ್ ಶ್ರೀಕಾಂತ್ ಅವರು ಸೋಮವಾರ ಮಧ್ಯರಾತ್ರಿ ಕೋವಿಡ್-19ಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ನಿಧನರಾದರು.

ಶ್ರೀಕಾಂತ್ ಅವರು ಪ್ರಾಜೆಕ್ಟ್ ಸೀಬರ್ಡ್‌ನ ಮಹಾ ನಿರ್ದೇಶಕರಾಗಿದ್ದರು.

ಈ ಹಿಂದೆ ಅವರು ಪರಮಾಣು ಸುರಕ್ಷತೆಯ ಇನ್ಸ್‌ಪೆಕ್ಟರ್ ಜನರಲ್ ಹಾಗೂ ರಾಷ್ಟ್ರೀಯ ರಕ್ಷಣಾ ಕಾಲೇಜಿನ ಕಮಾಂಟೆಂಡ್ ಸೇರಿದಂತೆ ಹಲವು ಹುದ್ದೆಗಳನ್ನು ನಿಭಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News