ಇಂಧನ ಸಚಿವ ಸುನೀಲ್‌ ಕುಮಾರ್ ಪ್ರವಾಸ

Update: 2022-03-08 15:12 GMT

ಉಡುಪಿ, ಮಾ.8: ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು ಮಾ.9ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಬೆಳಗ್ಗೆ 7:30ಕ್ಕೆ ನಿಟ್ಟೆ ಪದವು ಗೃಹ ಕಚೇರಿಯಲ್ಲಿ ಯುವ ಮೋರ್ಚಾ ತಂಡದೊಂದಿಗೆ ಹಾಗೂ 9 ಗಂಟೆಗೆ ಕಾರ್ಕಳ ವಿಕಾಸ ಕಚೇರಿಯಲ್ಲಿ ಎಸ್‌ಸಿ,ಎಸ್‌ಟಿ ಮೋರ್ಚಾದೊಂದಿಗೆ ಕಾರ್ಕಳ ಉತ್ಸವ ಕುರಿತ ಪೂರ್ವಭಾವಿ ಸಭೆ.

11 ಕ್ಕೆ ಹೆಬ್ರಿ ಚೈತನ್ಯ ಸಭಾಭವನದಲ್ಲಿ ಹೆಬ್ರಿ ಉತ್ಸವ ಸ್ವಚ್ಛತೆ ಕಾರ್ಯಕ್ರಮ ದಲ್ಲಿ ಭಾಗಿ, ಅಪರಾಹ್ನ 12 ಕ್ಕೆ ಕಾರ್ಕಳ ತಾಲೂಕು ಪಂಚಾಯತ್‌ನಲ್ಲಿ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಹಾಗೂ 2:30ಕ್ಕೆ ಕಾರ್ಕಳ ವಿಕಾಸ ಕಚೇರಿಯಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖರೊಂದಿಗೆ ಕಾರ್ಕಳ ಉತ್ಸವ ಕುರಿತ ಪೂರ್ವಭಾವಿ ಸಭೆ.

3:00ಕ್ಕೆ ಕಾರ್ಕಳ ವಿಕಾಸ ಕಚೇರಿಯಲ್ಲಿ ಕಾರ್ಕಳ ಉತ್ಸವ ಮೆರವಣಿಗೆ ಪ್ರಮುಖರೊಂದಿಗೆ ಪೂರ್ವಭಾವಿ ಸಭೆ, ಸಂಜೆ 4:00ಕ್ಕೆ ಕಾರ್ಕಳ ಗಾಂಧಿ ಮೈದಾನದಲ್ಲಿ ಕಾರ್ಕಳ ಉತ್ಸವದ ಎಲ್ಲಾ ಸಮಿತಿಗಳ ಪ್ರಮುಖರು ಮತ್ತು ಪ್ರಬಂಧಕರೊಂದಿಗೆ ಸಭೆ ನಡೆಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News