ಆಗುಂಬೆ ಘಾಟಿಯಲ್ಲಿ ಕಾಮಗಾರಿ: ವಾಹನ ಸಂಚಾರ ನಿರ್ಬಂಧ

Update: 2022-03-11 14:50 GMT

ಉಡುಪಿ, ಮಾ.11: ರಾಷ್ಟ್ರೀಯ ಹೆದ್ದಾರಿ 169ಎ ಇದರಲ್ಲಿ ಕಿ.ಮೀ.33.00 ರಿಂದ 51.60ರವರೆಗೆ ನಿಯತಕಾಲಿಕ ದುರಸ್ಥಿ ಹಿನ್ನೆಲೆಯಲ್ಲಿ, ರಸ್ತೆ ದುರಸ್ಥಿ ಕಾಮಗಾರಿಯನ್ನು ಆಗುಂಬೆ ಘಾಟಿಯಲ್ಲಿ ನಿರ್ವಹಿಸಬೇಕಾಗಿರುವುದರಿಂದ ಅಗಲ ಕಿರಿದಾದ ರಸ್ತೆಯಲ್ಲಿ ಡಾಂಬರೀಕರಣ ಸಮಯದಲ್ಲಿ ವಾಹನ ಸಂಚಾರ ಮಾಡಲು ಜಾಗವಿಲ್ಲದ ಕಾರಣ ಮಾ.15ರವರೆಗೆ ಆಗುಂಬೆ ಘಾಟಿಯಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಿ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ ನಡೆಸುವಂತೆ ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ.

ಬದಲಿ ಮಾರ್ಗದ ವಿವರ: ಲಘು ವಾಹನಗಳು ಉಡುಪಿ- ಕಾರ್ಕಳ- ಮಾಳಾಘಾಟ್- ಶೃಂಗೇರಿ-ಕೊಪ್ಪ-ತೀರ್ಥಹಳ್ಳಿ (ರಾ.ಹೆ 169) ಮಾರ್ಗವಾಗಿ ಹಾಗೂ ಭಾರೀ ವಾಹನಗಳು ಉಡುಪಿ- ಕುಂದಾಪುರ- ಸಿದ್ಧಾಪುರ- ಹೊಸಂಗಡಿ- ಮಾಸ್ತಿಕಟ್ಟೆ-ತೀರ್ಥಹಳ್ಳಿ (ರಾಜ್ಯ ಹೆದ್ದಾರಿ 52) ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News