ಪಾ.ವೆಂ.ಆಚಾರ್ಯರ ತುಳು ಕವನ ವಾಚನ ಸ್ಪರ್ಧೆ: ಅಕ್ಷಿತಾ ಶೆಟ್ಟಿ ಪ್ರಥಮ

Update: 2022-03-14 13:25 GMT

ಉಡುಪಿ : ಉಡುಪಿಯ  ರಥಬೀದಿ ಗೆಳೆಯರು ಬಳಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳಿಗಾಗಿ  ಏರ್ಪಡಿಸಿದ್ದ ಪಾ.ವೆಂ. ಆಚಾರ್ಯರ  ತುಳು ಕವನ  ವಾಚನ  ವೀಡಿಯೋ ಸ್ಪರ್ಧೆಯಲ್ಲಿ ಹೆಬ್ರಿಯ ಸರಕಾರಿ  ಪ್ರಥಮ  ದರ್ಜೆ ಕಾಲೇಜಿನ  ಬಿಕಾಮ್ ವಿದ್ಯಾರ್ಥಿನಿ ಅಕ್ಷಿತಾ ಕೆ ಶೆಟ್ಟಿ ಪ್ರಥಮ  ಬಹುಮಾನ  ಪಡೆದಿದ್ದಾರೆ.

ಕಟಪಾಡಿಯ  ತೃಶಾ  ವಿದ್ಯಾ ಕಾಲೇಜಿನ  ಪ್ರಥಮ  ಬಿಕಾಮ್ ವಿದ್ಯಾರ್ಥಿ ಅಖಿಲೇಶ್  ಪೂಜಾರಿ, ಅದೇ ಕಾಲೇಜಿನ  ಪ್ರಥಮ  ಬಿಕಾಮ್ ವಿದ್ಯಾರ್ಥಿನಿ ಅಂಕಿತಾ   ದ್ವಿತೀಯ ಬಹುಮಾನ ಹಂಚಿಕೊಂಡಿದ್ದಾರೆ. ಬ್ರಹ್ಮಾವರದ ಜಿ.ಎಂ. ವಿದ್ಯಾನಿಕೇತನ  ಪಬ್ಲಿಕ್ ಸ್ಕೂಲ್‌ನ ಅನುಷ್ಕ  ಎನ್ ಪಡುಕುದ್ರು ಪ್ರೋತ್ಸಾಹಕ ಬಹುಮಾನ  ಪಡೆದಿದ್ದಾರೆ ಎಂದು ರಥಬೀದಿ ಗೆಳೆಯರು ಕಾರ್ಯದರ್ಶಿ  ಸುಬ್ರಹ್ಮಣ್ಯ ಜೋಶಿ ತಿಳಿಸಿದ್ದಾರೆ.

ಪಾವೆಂ ನೆನಪಿನ ಕಾರ್ಯಕ್ರಮ: ರಥಬೀದಿ ಗೆಳೆಯರು ಆಶ್ರಯದಲ್ಲಿ ಪಾ. ವೆಂ.ಆಚಾರ್ಯ ನೆನಪಿನ ಕಾರ್ಯಕ್ರಮ ಮಾ.19ರಂದು ಸಂಜೆ 4.45ಕ್ಕೆ ಉಡುಪಿ ರಥಬೀದಿಯಲ್ಲಿರುವ ರಥಬೀದಿ ಗೆಳೆಯರು ಕಚೇರಿಯಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕೃಷ್ಣಮೂರ್ತಿ ರಾವ್ ಕಿದಿಯೂರು ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಹರಿಣಿ ಕಿದಿಯೂರು ಇವರು ಬಹುಮಾನ ವಿತರಿಸಲಾಗಿದ್ದಾರೆ ಎಂದೂ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News