ಹೆಬ್ರಿ: ಪಿಂಚಣಿ ಸಪ್ತಾಹ ಸಮಾರೋಪ
Update: 2022-03-15 15:53 GMT
ಉಡುಪಿ : ಕಾರ್ಮಿಕ ಇಲಾಖೆ ಉಡುಪಿ, ಗ್ರಾಮ ವಿಕಾಸ ಸಮಿತಿ ಹಾಗೂ ಶ್ರೀರಾಘವೇಂದ್ರ ಚಾರಿಟಬಲ್ ಟ್ರಸ್ಟ್ ಹೆಬ್ರಿ ಇವರ ಸಹಯೋಗ ದೊಂದಿಗೆ ಹೆಬ್ರಿ ಶ್ರೀರಾಮ ಮಂದಿರದಲ್ಲಿ ಪಿಂಚಣಿ ಸಪ್ತಾಹದ ಸಮಾರೋಪ ಹಾಗೂ ನೋಂದಣಿ ಶಿಬಿರ ನಡೆಯಿತು.
ಕಾರ್ಮಿಕ ಅಧಿಕಾರಿ ಕುಮಾರ್ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆ ಬಗ್ಗೆ ಮಾಹಿತಿ ನೀಡಿ ಎಲ್ಲಾ ಅಸಂಘಟಿತ ಕಾರ್ಮಿಕರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ. ಭಾರ್ಗವಿ, ಉದ್ಯಮಿಗಳಾದ ಗುರುದಾಸ್ ಶಣೈ ಮತ್ತು ಯೋಗಿಶ್ ಭಟ್, ಹೆಬ್ರಿ ಗ್ರಾಪಂ ಸದಸ್ಯ ಉದಯ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.