ತುಳು ಕವನ ವಾಚನ ವಿಡಿಯೋ ಸ್ಪರ್ಧೆ: ಬಹುಮಾನ ವಿತರಣೆ
Update: 2022-03-19 16:07 GMT
ಉಡುಪಿ : ಉಡುಪಿ ರಥಬೀದಿ ಗೆಳೆಯರು ವತಿಯಿಂದ ಪಾ.ವೆಂ. ಆಚಾರ್ಯರ ನೆನಪಿನಲ್ಲಿ ಹಮ್ಮಿಕೊಳ್ಳಲಾದ ಪಾ.ವೆಂ.ಆಚಾರ್ಯರ ತುಳು ಕವನ ವಾಚನ ವಿಡಿಯೋ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯ ಕ್ರಮ ಇಂದು ರಥಬೀದಿ ಗೆಳೆಯರು ಕಚೇರಿಯಲ್ಲಿ ನಡೆಯಿತು.
ವಿಜೇತರಾದ ಹೆಬ್ರಿಯ ಅಕ್ಷಿತಾ ಕೆ.ಶೆಟ್ಟಿ ಪ್ರಥಮ, ಅಖಿಲೇಶ್ ಉಡುಪಿ ಮತ್ತು ಅಂಕಿತಾ ಕಟಪಾಡಿ ದ್ವಿತೀಯ ಬಹುಮಾನ ಪಡೆದುಕೊಂಡರು. ಬಹು ಮಾನವನ್ನು ಪಾ.ವೆಂ.ಆಚಾರ್ಯರ ಪುತ್ರಿ ಅಹಲ್ಯಾ ಕಿದಿಯೂರು ವಿತರಿಸಿ ದರು. ಮುಖ್ಯ ಅತಿಥಿಯಾಗಿ ಕೃಷ್ಣಮೂರ್ತಿ ರಾವ್ ಕಿದಿಯೂರು ಮಾತನಾಡಿದರು.
ಪಾ.ವೆಂ.ಆಚಾರ್ಯ ಟ್ರಸ್ಟ್ನ ಪ್ರೊ.ರಾಧಾಕೃಷ್ಣ ಆಚಾರ್ಯ ಉಪಸ್ಥಿತರಿದ್ದರು. ರಥಬೀದಿ ಗೆಳೆಯರು ಅಧ್ಯಕ್ಷ ಮುರಳೀಧರ ಉಪಾಧ್ಯ ಸ್ವಾಗತಿಸಿದರು. ಕಾರ್ಯ ದರ್ಶಿ ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ನಿರೂಪಿಸಿದರು.