ಹೊಳೆಗೆ ಬಿದ್ದು ಮೃತ್ಯು
Update: 2022-03-21 16:05 GMT
ಬ್ರಹ್ಮಾವರ : ವ್ಯಕ್ತಿಯೊಬ್ಬರು ಮಡಿ ಹೊಳೆಯ ನೀರಿಗೆ ಬಿದ್ದು ಮೃತಪಟ್ಟ ಘಟನೆ ಮಾ.20ರಂದು ರಾತ್ರಿ ಚೇರ್ಕಾಡಿ ಗ್ರಾಮದ ಇಮ್ರಗುಳಿಯ ದೇವರುಗುಂಡಿ ಎಂಬಲ್ಲಿ ನಡೆದಿದೆ.
ಮೃತರನ್ನು ರೇಮಂಡ್ ಡಿ ಅಲ್ಮೇಡಾ(೫೩) ಎಂದು ಗುರುತಿಸಲಾಗಿದೆ. ವಿಪರೀತ ಮದ್ಯಪಾನ ಚಟ ಹೊಂದಿದ್ದ ಇವರು, ಆಕಸ್ಮಿಕವಾಗಿ ಕಾಲುಜಾರಿ ಮಡಿ ಹೊಳೆಯ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.