ಕೆಎಸ್‌ಸಿಎ ಕ್ರಿಕೆಟ್: ನೇತಾಜಿ ಪರ್ಕಳ, ಕುಂದಾಪುರ ತಂಡಗಳು ಫೈನಲಿಗೆ

Update: 2022-03-29 13:52 GMT

ಮಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆದಿರುವ ಎರಡನೆ ಡಿವಿಜನ್ ಲೀಗ್ ಕಂ ನಾಕೌಟ್ ಕ್ರಿಕೆಟ್ ಪಂದ್ಯಾಟದಲ್ಲಿ  ಪರ್ಕಳದ ನೇತಾಜಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಕುಂದಾಪುರ ತಂಡಗಳು ಫೈನಲ್‌ಗೆ ಪ್ರವೇಶಿಸಿವೆ.

ನವಮಂಗಳೂರಿನ ಅಂಬೇಡ್ಕರ್ ಸ್ಟೇಡಿಯಂನಲ್ಲಿ ನಡೆದ ಉಪಾಂತ್ಯ ಪಂದ್ಯ ದಲ್ಲಿ ನೇತಾಜಿ ಸ್ಪೋರ್ಟ್ಸ್ ಕ್ಲಬ್ ಪರ್ಕಳ ತಂಡ, ರಾಯಲ್ ಫ್ರೆಂಡ್ಸ್ ಉಚ್ಚಿಲ ತಂಡವನ್ನು ೭ ವಿಕೆಟುಗಳ ಅಂತರದಿಂದ ಮಣಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ರಾಯಲ್ ತಂಡವು ರೋಹಿತ್ ಮತ್ತು ಆಶೀಷ್ ಅವರ ಸ್ಪಿನ್ ಬೌಲಿಂಗ್ ಎದುರು ಕುಸಿದು ೨೩ ಓವರುಗಳಲ್ಲಿ ೬೯ರ ಮೊತ್ತಕ್ಕೆ ಆಲೌಟಾಯಿತು.  ರೋಹಿತ್ ೧೭ ರನ್ ನೀಡಿ ೫ ವಿಕೆಟ್ ಪಡೆದರೆ, ಆಶೀಷ್ ೨೩ ರನ್‌ಗೆ ಮೂರು ವಿಕೆಟ್ ಪಡೆದರು. ನೇತಾಜಿ ತಂಡವು ೩ ವಿಕೆಟ್‌ಗಳ ನಷ್ಟಕ್ಕೆ ಜಯದ ಗುರಿ ಯನ್ನು ತಲುಪಿತು.

ದೇರಳಕಟ್ಟೆಯ ಫಾದರ್ ಮುಲ್ಲರ್ಸ್‌ ಮೈದಾನದಲ್ಲಿ ಜರಗಿದ ಇನ್ನೊಂದು ಉಪಾಂತ್ಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕುಂದಾಪುರ ತಂಡ, ೫೦ ಓವರುಗಳಲ್ಲಿ ೨೭೪ ರನ್‌ಗಳನ್ನು ಕಲೆ ಹಾಕಿತು. ಉತ್ತರವಾಗಿ ಬಂಟ್ವಾಳ ತಂಡವು ೧೭೦ ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ೧೦೪ ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News