ಚುನಾವಣಾ ದೃಷ್ಠಿಯಿಂದ ಕಾಂಗ್ರೆಸ್ ಪ್ರತಿಭಟನೆ: ಕೋಟ ಶ್ರೀನಿವಾಸ ಪೂಜಾರಿ

Update: 2022-04-01 13:30 GMT

ಕುಂದಾಪುರ : ಜನರು ಕಾಂಗ್ರೆಸ್ ಪ್ರತಿಭಟನೆಗಳಿಗೆ ಹೆಚ್ಚು ಮೌಲ್ಯ ಕೊಟ್ಟಂತೆ ಕಾಣಿಸುತ್ತಿಲ್ಲ. ಕಾಂಗ್ರೆಸ್ ಮುಂಬರುವ ಚುನಾವಣೆಯ ದೃಷ್ಠಿಯಿಂದ ಇಂತಹ ಪ್ರತಿಭಟನೆಗಳನ್ನು ನಡೆಸುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ.

ಕುಂದಾಪುರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ಸಿಗರಿಗೆ ಕೆಲ ವಿಚಾರ ನೆನಪಾಗುತ್ತದೆ. ಆಗ ಇಂತಹ ಚಟುವಟಿಗಳು ನಡೆಸುವುದು ಕಾಂಗ್ರೆಸ್ ಸಂಪ್ರದಾಯಗಳಲ್ಲೊಂದು. ಏಕಾಏಕಿ ಕಾಂಗ್ರೆಸ್ ಸ್ನೇಹಿತರಿಗೆ ಮೇಕೆದಾಟು, ಕೃಷ್ಣ ಮೇಲ್ದಂಡೆ,  ನೀರಾವರಿ, ಬೆಲೆ ಏರಿಕೆ ನೆನಪಾಗಿ ಬಿಡುತ್ತದೆ. ಸಹಜವಾಗಿಯೇ ಈ ಬಾರಿಯೂ ಕಾಂಗ್ರೆಸ್ ಗೆ  ಬೆಲೆ ಏರಿಕೆ ನೆನಪಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News