ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆ ಉದ್ಘಾಟನೆ

Update: 2022-04-15 13:34 GMT

ಕುಂದಾಪುರ : ಜಿಲ್ಲಾ ಸಾಹಿತ್ಯ ಸಮ್ಮೇಳನ ವಠಾರದಲ್ಲಿ ತೆರೆಯಲಾದ ಪುಸ್ತಕ ಮಳಿಗೆಯನ್ನು ಕಾಸರಗೋಡು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ವಿ.ಭಟ್ ಉದ್ಘಾಟಿಸಿದರು.

ಸಮ್ಮೇಳನಾಧ್ಯಕ್ಷ ಪ್ರೊ.ಎ.ವಿ.ನಾವಡ ಮಳಿಗೆಯಲ್ಲಿ ಪುಸ್ತಕ ವಿಕ್ರಯಿಸಿ ತಮ್ಮ ಪುಸ್ತಕ ಪ್ರೇಮ ವ್ಯಕ್ತಪಡಿಸಿದರು. ಡಾ.ಗಾಯತ್ರಿ ವಿ.ನಾವಡ. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮೊದಲಾದವರು ಇದ್ದರು.

ಪುಸ್ತಕ ಬಿಡುಗಡೆ ಸನ್ಮಾನ: ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು ಐದು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ವಿಠಲ ವಿ.ಪೂಜಾರಿ ಅವರ ‘ನಂದಾದೀಪ’, ಕುಂದಾಪುರ ನಕ್ಷತ್ರ ಜ್ಯುವೆಲ್ಲರ್ಸ್ ನವೀನ್ ಹೆಗ್ಡೆ ಪ್ರಾಯೋಜಕತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರ ‘ನುಡಿಯೊಂದು ನಕ್ಷತ್ರ’, ಶಿಕ್ಷಕಿ ಸುಮಿತ್ರಾ ಐತಾಳ್ ಅವರ ’ಕುಂದಾಪ್ರ ಕನ್ನಡ ಆಚರಣೆ ಗಾದೆಗಳು’, ’ಕುಂದಾಪ್ರ ಕನ್ನಡ ಮೂರು ನಾಟಕ’ ಹಾಗೂ ನರೇಂದ್ರ ಕುಮಾರ್ ಕೋಟ ಇವರ ‘ಸೋಲು ಅಂತಿಮವಲ್ಲ’ ಕೃತಿಗಳನ್ನು ಡಾ. ಗಾಯತ್ರಿ ವಿ.ನಾವಡ ಬಿಡುಗಡೆ ಮಾಡಿ, ಕವಿಗಳನ್ನು ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News