ಮೇ 15ಕ್ಕೆ ಎಸ್.ದಿವಾಕರ್‌ಗೆ ಕಲಾಪ್ರವೀಣ ಪ್ರಶಸ್ತಿ ಪ್ರದಾನ

Update: 2022-05-12 12:16 GMT

ಉಡುಪಿ : ರಾಗಧನ ಸಂಸ್ಥೆ ಉಡುಪಿ ಇದರ ವಾರ್ಷಿಕ ಮಹಾಸಭೆ ಮೇ ೧೫ರ ರವಿವಾರ ಪರ್ಕಳದ ಕುಕ್ಕುದಕಟ್ಟೆ ಯಲ್ಲಿರುವ ಸರಿಗಮ ಭಾರತಿ ವೇದಿಕೆಯಲ್ಲಿ ಅಪರಾಹ್ನ 3ರಿಂದ ನಡೆಯಲಿದೆ. 

ಈ ಸಂದರ್ಭದಲ್ಲಿ ಕಲಾವಿಮರ್ಶಕ ಕಲಾವಿಹಾರಿ ಎ.ಈಶ್ವರಯ್ಯ ಸ್ಮರಣಾರ್ಥ ಅವರ ಕುಟುಂಬದವರು ಕೊಡ ಮಾಡುವ ಈ ವರ್ಷದ ‘ಕಲಾಪ್ರವೀಣ’ ಪ್ರಶಸ್ತಿಯನ್ನು ಖ್ಯಾತ ಹಿರಿಯ ವಿಮರ್ಶಕರು, ಸಾಹಿತಿಗಳೂ ಆದ ಬೆಂಗಳೂರಿನ ಎಸ್. ದಿವಾಕರ್ ಅವರಿಗೆ ಪ್ರದಾನ ಮಾಡಲಾಗುವುದು.

ಖ್ಯಾತ ವಿಮರ್ಶಕ, ಲೇಖಕ ಪ್ರೊ. ಮುರಲೀಧರ ಉಪಾಧ್ಯ ಹಿರಿಯಡ್ಕ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಿಕ್ಷಣ ತಜ್ಞ ಹಾಗೂ ಸಾಹಿತಿ ಡಾ. ಮಹಾಬಲೇಶ್ವರ ರಾವ್ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದು ರಾಗಧನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಭಾ ಕಾರ್ಯಕ್ರಮದ ಬಳಿಕ  ಬೆಂಗಳೂರಿನ ಅದಿತಿ ಪ್ರಹ್ಲಾದ್ ಅವರ ಸಂಗೀತ ಕಚೇರಿ ನಡೆಯಲಿದೆ. ಪಿಟೀಲಿ ನಲ್ಲಿ ತನ್ಮಯಿ ಉಪ್ಪಂಗಳ, ಮೃದಂಗದಲ್ಲಿ ಡಾ.ಬಾಲಚಂದ್ರ ಆಚಾರ್ ಸಹಕರಿಸಲಿದ್ದಾರೆ ಎಂದು ರಾಗಧನದ ಕಾರ್ಯದರ್ಶಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News