ಯುವಕ ನಾಪತ್ತೆ

Update: 2022-07-26 05:32 GMT

ಉಡುಪಿ : ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ನೆಲ್ಲದ ಬೆಟ್ಟು ನಿವಾಸಿ ಪ್ರವೀಣ (೨೬) ಎಂಬ ವ್ಯಕ್ತಿಯು ಮೇ ೪ರಂದು ಅಪರಾಹ್ನ ೨:೩೦ರ ಸುಮಾರಿಗೆ ಮನೆಯಿಂದ ತೆರಳಿದವರು ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. 

೧೬೫ ಸೆಂ.ಮೀ.ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ, ಕೋಲು ಮುಖ ಹೊಂದಿದ್ದು ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ವೃತ್ತ ಕಛೇರಿ ದೂ.ಸಂಖ್ಯೆ: ೦೮೨೫೮-೨೩೧೦೮೩, ಮೊ.ನಂ. ೯೪೮೦೮೦೫೪೩೫, ಕಾರ್ಕಳ ಗ್ರಾಮಾಂತರ ಠಾಣೆ ದೂ.ಸಂಖ್ಯೆ: ೦೮೨೫೮-೨೩೨೦೮೩, ೨೩೩೧೦೦, ಮೊ.ನಂ: ೯೪೮೦೮೦೫೪೬೨, ಅನ್ನು ಸಂಪರ್ಕಿಸುವಂತೆ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News