ಬ್ರಹ್ಮಾವರದಲ್ಲಿ ವಿಶ್ವ ಪರಿಸರ ದಿನಾಚರಣೆ

Update: 2022-06-04 15:06 GMT

ಉಡುಪಿ : ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಜಯಂಟ್ಸ್ ಗ್ರೂಪ್ ಮತ್ತು ಸುವರ್ಣ ಎಂಟರ್‌ಪ್ರೈಸಸ್, ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಬ್ರಹ್ಮಾವರ, ನಮ್ಮ ಮನೆ ನಮ್ಮ ಮರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಸಾಮಾಜಿಕ ಅರಣ್ಯ ಇಲಾಖೆಯ ಸಹಕಾರದಲ್ಲಿ  ಆಸಕ್ತ ಸಾರ್ವಜನಿಕರಿಗೆ ವಿವಿಧ ತಳಿಯ ಗಿಡಗಳ ಉಚಿತ ವಿತರಣೆಯು ಬ್ರಹ್ಮಾವರದ ಪ್ರಧಾನ ಮಂತ್ರಿ ಭಾರತೀಯ ಜನಔಷಧಿ ಕೇಂದ್ರದಲ್ಲಿ ಜರುಗಲಿದೆ. ಆಸಕ್ತರು ಆಧಾರ್ ಕಾರ್ಡ ನಂಬರ್ ನೀಡಿ ಹೆಸರು ನೊಂದಾಯಿಸಬಹುದು. ಜೂ.೭ರಂದು ಮಂಗಳವಾರ  ಬೆಳಗ್ಗೆ ೧೦:೩೦ಕ್ಕೆ ಗಿಡಗಳ ವಿತರಣೆ ಜರುಗಲಿದೆ. ಸಸ್ಯಗಳನ್ನು ಪಡೆದುಕೊಂಡು ತಮ್ಮ ಸ್ಥಳಗಳಲ್ಲಿ ನೆಟ್ಟು ಬೆಳೆಸಿದ ಗಿಡಗಳ ವಾಟ್ಸ್ ಆಪ್ ಫೋಟೊ ಆಧಾರದಲ್ಲಿ ಬಹುಮಾನ ವಿತರಿಸಲಾಗುವುದು. ತನ್ಮೂಲಕ ಪರಿಸರಕ್ಕೆ ತನ್ನದೆ ಕೊಡುಗೆಯನ್ನು ನೀಡಬಹುದು.

ನೊಂದಾವಣೆಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂ.: ೯೮೪೫೭೯೨೦೦೪, ೯೮೪೫೨೪೦೩೦೯, ೯೯೮೦೬೬೪೭೮೧ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News