ಪ್ರಮೋದ್ ಮುತಾಲಿಕ್, ಯಶ್ಪಾಲ್ ಸುವರ್ಣಗೆ ಬೆದರಿಕೆ ಪ್ರಕರಣ : ಆರೋಪಿ ಸೆರೆ
Update: 2022-06-18 15:47 GMT
ಉಡುಪಿ : ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ಅವರಿಗೆ ಸಾಮಾಜಿಕ ಜಾಲ ತಾಣದಲ್ಲಿ ಬೆದರಿಕೆ ಹಾಕಿದ ಆರೋಪದಡಿ ಓರ್ವ ಆರೋಪಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಬಜ್ಪೆ ಕೊಂಚಾರು ನಿವಾಸಿ ಮುಹಮ್ಮದ್ ಶಾಫಿ (26) ಬಂಧಿತ ಆರೋಪಿ. ಇನ್ನೋರ್ವ ಆರೋಪಿ ಆಸೀಫ್ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈತ ಆರು ತಿಂಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಮಾರಿ ಗುಡಿ ಎಂಬ ಪೇಜ್ ಸೃಷ್ಠಿಸಿ ಯಶ್ಪಾಲ್ ಸುವರ್ಣ ಹಾಗೂ ಪ್ರಮೋದ್ ಮುತಾಲಿಕ್ ಫೋಟೋ ಇರುವ ಪೋಸ್ಟ್ ಸೃಷ್ಠಿಸಿ, ಇವರ ತಲೆ ಕಡೆದರೆ 20 ಲಕ್ಷ ರೂ. ಹಣ ಘೋಷಣೆ ಮಾಡಿದ್ದನು. ಈ ಸಂಬಂಧ ಬಿಜೆಪಿಯ ಸಚಿನ್ ಸುವರ್ಣ ನೀಡಿದ ದೂರಿನಂತೆ ಜೂ.8ರಂದು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.