ಉಡುಪಿಯನ್ನು ನೆರೆಪೀಡಿತ ಜಿಲ್ಲೆಯೆಂದು ಘೋಷಿಸಲು ಜಿಲ್ಲಾ ಕಾಂಗ್ರೆಸ್ ಮನವಿ

Update: 2022-07-12 07:09 GMT

ಉಡುಪಿ, ಜು.12: ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿದ ಪರಿಣಾಮˌ ಗಾಳಿ ಮಳೆಗೆ ಹಲವು ಮನೆಗಳು ಹಾನಿಗೊಂಡಿವೆ. ಕೃಷಿ ಭೂಮಿಗಳು ಜಲಾವೃತ ಗೊಂಡಿವೆˌ ಈ ಹಿನ್ನೆಲೆಯಲ್ಲಿ ಉಡುಪಿಯನ್ನು ನೆರೆಪೀಡಿತ ಜಿಲ್ಲೆಯೆಂದು ಘೋಷಿಸಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್  ಕೊಡವೂರು  ನೇತೃತ್ವದಲ್ಲಿ  ಮುಖ್ಯಮಂತ್ರಿಗೆ ಮನವಿಯ ಮೂಲಕ ಆಗ್ರಹಿಲಾಯಿತು.

ಈ ಸಂಬಂಧ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ವೀಣಾ ಅವರ ಮೂಲಕ ಮಂಗಳವಾರ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ  ಮಾಜಿ ಸಚಿವ ವಿನಯಕುಮಾರ್ ಸೊರಕೆˌ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ..ಎ.ಗಪೂರ್ˌ ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೇಲಿಯೊˌ ವಕ್ತಾರರಾದ ಭಾಸ್ಕರ ರಾವ್ ಕಿದಿಯೂರುˌ ಮುಖಂಡರಾದ ಗಣೇಶ್ ಕೋಟ್ಯಾನ್ˌ ಅಶೋಕ್ ನ್ಯಾಯರಿˌ ಸುಧೀರ್ ಪಡುಬಿದ್ರೆ  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News