ಮಟ್ಟುವಿನಿಂದ ಶಿರ್ವ ಪೇಟೆಯವರೆಗೆ ಕಾಲ್ನಡಿಗೆ ಜಾಥಾ: ವಿನಯ್ ಕುಮಾರ್ ಸೊರಕೆ

Update: 2022-07-18 18:01 GMT

ಕಾಪು : ಭಾರತವು  75ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮಾಚಾರಣೆಯ ಹೊಸ್ತಿಲಲ್ಲಿದ್ದು ಇದನ್ನು ವೈಭವಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ, ಕಾಪು ಕ್ಷೇತ್ರದಲ್ಲಿ ಕೋಟೆ ಗ್ರಾಮದ  ಮಟ್ಟುವಿನಿಂದ ಶಿರ್ವ ಪೇಟೆಯವರೆಗೆ ಕಾಲ್ನಡಿಗೆ ಜಾಥವು ನಡೆಯಲಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಕರೆ ನೀಡಿದರು. 

ಅವರು ಇಂದು ಕಾಪು ರಾಜೀವ್ ಭವನದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಯ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸ್ವಾತಂತ್ರ್ಯ ವೀರ-ಯೋಧರ ತ್ಯಾಗ, ಬಲಿದಾನ, ಶಾಂತಿ, ಅಹಿಂಸೆಯ ಪ್ರತೀಕವಾಗಿ  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ದೇಶದಾದ್ಯಂತ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡಿದ್ದು, ಆ ಪ್ರಯುಕ್ತ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. 

ಸಿದ್ಧರಾಮೋತ್ಸವಕ್ಕೆ ಬಸ್ಸಿನ ವ್ಯವಸ್ಥೆ: ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯನವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ದಾವಣಗೆರೆಯಲ್ಲಿ ಅದ್ದೂರಿಯಾಗಿ ನಡೆಯಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಲು ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.  

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಹಾಗೂ ಪಕ್ಷದ ರಾಜಕೀಯ ವ್ಯವಹಾರ ಸಮಿತಿಯ ವಿಶೇಷ ಆಹ್ವಾನಿತರಾಗಿ ನೇಮಕಗೊಂಡ ವಿನಯ್ ಕುಮಾರ್ ಸೊರಕೆಯವರನ್ನು ಮತ್ತು ಉಡುಪಿ ಜಿಲ್ಲಾ ಮೀನುಗಾರರ ವೇದಿಕೆಯ ಅಧ್ಯಕ್ಷರಾಗಿ ನೇಮಕಗೊಂಡ ಮಾಜಿ ಯೋಧ ರಾಜೇಶ್ ಮೆಂಡನ್ ರನ್ನು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರವಾಗಿ ಅಭಿನಂದಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನಚಂದ್ರ ಸುವರ್ಣ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಯ್ ಬಲ್ಲಾಳ್, ರಾಜ್ಯ ಹಿಂದುಳಿದ ವರ್ಗ ಘಟಕದ ಕಾರ್ಯದರ್ಶಿ ಬೆಳ್ಳೆ ಶಿವಾಜಿ ಸುವರ್ಣ, ಯುವ ಕಾಂಗ್ರೆಸ್ ನ ರಾಜ್ಯ ಪ್ರ.ಕಾರ್ಯದರ್ಶಿ ನವೀನ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ,  ರಮೀಜ್ ಹುಸೈನ್, ಶರ್ಫುದ್ದೀನ್ ಶೇಕ್, ಸುಧಾಕರ್ .ಕೆ, ವೈ.ಗಂಗಾಧರ ಸುವರ್ಣ,  ಸರಸು ಡಿ. ಬಂಗೇರ, ಐಡಾ ಗಿಬ್ಬ ಡಿಸೋಜ, ವೈ.ಸುಧೀರ್, ಅಶ್ವಿನಿ ನವೀನ್, ಫರ್ಜಾನ ಸಂಜಯ್, ಶೋಭಾ ಬಂಗೇರ, ರಾಧಿಕಾ ಸುವರ್ಣ, ವಿದ್ಯಾಲತಾ, ಆಸಿಫ್ ಮೂಳೂರು, ಸುನಿಲ್ ಬಂಗೇರ, ದೀಪಕ್ ಎರ್ಮಾಳ್, ಎಚ್.ಅಬ್ದುಲ್ಲಾ, ಪ್ರಭಾ ಬಿ.ಶೆಟ್ಟಿ,  ವಿಲ್ಸನ್ ರಾಡ್ರಿಗಸ್, ಮೆಲ್ವಿನ್ ಡಿಸೋಜ, ಶ್ರೀಕರ್ ಅಂಚನ್, ಮಹೇಶ್ ಶೆಟ್ಟಿ ಬಿಳಿಯಾರ್, ಕರುಣಾಕರ ಪೂಜಾರಿ, ರತನ್ ಶೆಟ್ಟಿ, ಸುಧೀರ್ ಕರ್ಕೇರ ಕಿಶೋರ್ ಎರ್ಮಾಳ್, ಅರುಣಾ ಕುಮಾರಿ, ಬಾಲಚಂದ್ರ ಎರ್ಮಾಳ್, ಹಮೀದ್ ಯೂಸುಫ್, ಲಕ್ಷ್ಮೀಶ ತಂತ್ರಿ, ನಡಿಕೆರೆ ರತ್ನಾಕರ್ ಶೆಟ್ಟಿ, ಕೆ.ಎಚ್.ಉಸ್ಮಾನ್, ಇಮ್ರಾನ್ ಮಜೂರ್, ಸಿಮ್ಮಿ ಡಿಸೋಜ, ಯಶವಂತ ಪಲಿಮಾರ್, ಮೊಹಮ್ಮದ್ ನಯೀಮ್, ರಹಿಮಾನ್ ಕನ್ನಂಗಾರ್, ಮಾಧವ ಪಾಲನ್, ಬಬ್ಬಣ್ಣ ನಾಯಕ್,ಸುಭಾಸ್ ಸಾಲ್ಯಾನ್,ಮುಬೀನ ಲಿಯಾಖತ್, ಸಿರಾಜ್ ಉಚ್ಚಿಲ, ಸತೀಶ್ ಡೇಜಾಡಿ, ರಹಿಮ್ ಕುಂಜೂರ್, ಪ್ರಭಾಕರ್ ಆಚಾರ್ಯ, ತಸ್ನೀನ್ ಅರಃ, ಸೋಮನಾಥ್, ಅಶೋಕ್ ನಾಯರಿ ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಬ್ಲಾಕ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಮೀರ್ ಕಾಪು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಗಣೇಶ್ ಕೋಟ್ಯಾನ್ ಧನ್ಯವಾದವಿತ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News