ಕೊಪ್ಪಳ | ಹುಲಿಹೈದರ್ ಗುಂಪು‌ ಘರ್ಷಣೆ ಬಳಿಕ ಗ್ರಾಮ ತೊರೆದಿದ್ದ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Update: 2022-11-08 07:03 GMT

ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಆಗಸ್ಟ್‌ 11ರಂದು ನಡೆದಿದ್ದ ಗುಂಪು ಘರ್ಷಣೆ ಬಳಿಕ ಗ್ರಾಮ ತೊರೆದಿದ್ದ ಯುವಕನೋರ್ವನ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ ಮಂಗಳವಾರ ವರದಿಯಾಗಿದೆ. 

ನಾಗರಾಜ್ (25) ಮೃತ ಯುವಕನಾಗಿದ್ದು, ಗ್ರಾಮದಲ್ಲಿ ಗುಂಪು‌ ಘರ್ಷಣೆ ನಂತರ ನಾಗರಾಜ್ ಸೇರಿದಂತೆ ಅನೇಕರು ಊರು ತೊರೆದಿದ್ದರೆನ್ನಲಾಗಿದೆ. ಆದರೆ ಸಾವಿನ ಕಾರಣ ಎನೆಂಬುದು ಗೊತ್ತಾಗಿಲ್ಲ. 

ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಆಗಸ್ಟ್‌ 11ರಂದು ನಡೆದಿದ್ದ ಗುಂಪು ಘರ್ಷಣೆಯಲ್ಲಿ ಪಾಷಾ ವಲಿ ಮತ್ತು ಯಂಕಪ್ಪ ತಳವಾರ ಹತ್ಯೆಗೀಡಾಗಿದ್ದು, ಹಲವರು ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 70ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಘಟನೆ ಬಗ್ಗೆ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ಅಧಿಕಾರಿಯನ್ನು ಅಮಾನತು ಮಾಡಲಾಗಿತ್ತು. 

ಇದನ್ನೂ ಓದಿ... ಕೊಪ್ಪಳ | ಹುಲಿಹೈದರ್ ಗ್ರಾಮದಲ್ಲಿ ಘರ್ಷಣೆ ಪ್ರಕರಣ: ಮೂವರು ಪೊಲೀಸ್ ಸಿಬ್ಬಂದಿ ಸೇರಿ ನಾಲ್ವರು ಅಮಾನತು

ಇದನ್ನೂ ಓದಿ... ಪೊಲೀಸರ ಕರ್ತವ್ಯ ಲೋಪದಿಂದಲೇ ಕೊಪ್ಪಳದ ಹುಲಿಹೈದರ್ ಗ್ರಾಮದಲ್ಲಿ ಗಲಭೆ: ಬಹುತ್ವ ಕರ್ನಾಟಕ ಆರೋಪ

Similar News