ಎಂ.ಬಿ.ಪಾಟೀಲ್ ಸವಾಲು ಸ್ವೀಕರಿಸುತ್ತೇನೆ: ಶಾಸಕ ಸಿ.ಟಿ.ರವಿ

Update: 2022-12-04 17:50 GMT

ಚಿಕ್ಕಮಗಳೂರು, ಡಿ.4: ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ನನಗೆ ಬೆದರಿಕೆ ಹಾಕಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಬೆದರಿಕೆ ನಡೆಯಲ್ಲ. ಅವರು ಶ್ರೀಮಂತರಿರಬಹುದು, ಪಾಳೆಗಾರರಲ್ಲ. ಅವರ ಸವಾಲು ಸ್ವೀಕರಿಸುತ್ತೇನೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಎಂ.ಬಿ.ಪಾಟೀಲ್ ಹೇಳಿಕೆ ವಿಚಾರವಾಗಿ ರವಿವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಅಂಬೇಡ್ಕರ್ ಅವರು ಎಲ್ಲರಿಗೂ ಒಂದೇ ಓಟು ನೀಡಿದ್ದಾರೆ. ಪಾಟೀಲ್ ಅವರಿಗೆ ಎರಡು ಓಟಿನ ಹಕ್ಕು ನೀಡಿಲ್ಲ. ಅವರು ಪಾಳೇಗಾರರ ಮನಸ್ಥಿತಿ ಬಿಡಬೇಕು. ಪಾಟೀಲ್ ಅವರ ಸವಾಲು ಸ್ವೀಕರಿಸುತ್ತೇನೆ. ಅವರ ಊರಿಗೆ ಬಂದು ಅಲ್ಲಿಯೇ ಏನು ಹೇಳಬೇಕೋ ಅದನ್ನು ಹೇಳಿಯೇ ತೀರುತ್ತೇನೆ. ಅವರಷ್ಟು ಶ್ರೀಮಂತಿಗೆ ನನಗಿಲ್ಲ. ಶ್ರೀಮಂತಿಕೆಯ ದರ್ಪವನ್ನು ಕರ್ನಾಟಕದಲ್ಲಿ ತೋರಬೇಡಿ. ಕರ್ನಾಟಕದ ಯಾರಪ್ಪನ ಮನೆಯ ಆಸ್ತಿಯೂ ಅಲ್ಲ ಎಂದು ತಿರುಗೇಟು ನೀಡಿದರು.

‘ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ಹೇಳಿಕೆ ಸರಿಯಲ್ಲ. ರವಿ ವಿರುದ್ಧ ನಾವು ಪ್ರತಿಭಟನೆ ಆರಂಭಿಸಿದರೆ ಅವರು ಮನೆಯಿಂದ ಹೊರಬರಲು ಸಾಧ್ಯವಿಲ್ಲ’ ಎಂದು ಎಂ.ಬಿ. ಪಾಟೀಲ್ ಹೇಳಿಕೆ ನೀಡಿದ್ದರು. 

Similar News