ಮರಕ್ಕೆ ಢಿಕ್ಕಿ ಹೊಡೆದ ಆಟೋ: ಓರ್ವ ಮೃತ್ಯು

Update: 2022-12-12 06:06 GMT

ತುಮಕೂರು, ಡಿ.12: ಎದುರಿನಿಂದ ಬರುತ್ತಿದ್ದ  ಕಾರು ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಆಟೋ ಒಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ರವಿವಾರ ತಡರಾತ್ರಿ ನಡೆದಿದೆ.

ನಗರದ ಶೆಟ್ಟಿಹಳ್ಳಿ ರಾಘವೇಂದ್ರ ಸ್ವಾಮಿಮಠದ ಬಳಿ ಇರುವ ಗೋದಾವರಿ ಮೆಸ್ ಬಳಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಕೆ ಪಾಲಸಂದ್ರ ವಾಸಿ ನಂಜುಂಡಪ್ಪ (60) ಮೃತ ವ್ಯಕ್ತಿ, ಶೆಟ್ಟಿಹಳ್ಳಿ ಕಡೆ ತೆರಳುತ್ತಿದ್ದ ಆಟೋ ದಲ್ಲಿ ಮೂವರು ಪ್ರಯಾಣಿಸುತ್ತಿದ್ದರು,ಈ ವೇಳೆ ಎದುರು ದಿಕ್ಕಿನಿಂದ ಬಂದ ಕಾರನ್ನು ತಪ್ಪಿಸಲು ಹೋಗಿ ಆಟೋ ಮರಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಆಟೋದಲ್ಲಿದ್ದ ಪ್ರಯಾಣಿಕ ನರೇಂದ್ರ ಬಾಬು(37) ,ಆಟೋ ಚಾಲಕ ಶೆಟ್ಟಳಪ್ಪ( 47) ಹಾಗೂ ಮೃತನ ಪತ್ನಿ ಗಂಗಾಣಮ್ಮ ಅವರಿಗೆ ಗಾಯಗಳಾಗಿವೆ.

ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News