ಮುಂಬೈನ ಹೋಟೆಲ್‌ ಉದ್ಯಮಿಯನ್ನು ಅಪಹರಿಸಿದ ದುಷ್ಕರ್ಮಿಗಳು: ಪೊಲೀಸರಿಂದ ರಕ್ಷಣೆ

Update: 2023-04-25 09:42 GMT

ಮುಂಬೈ: ಆರ್ಥಿಕ ವಿವಾದದ ಹಿನ್ನೆಲೆಯಲ್ಲಿ ಮುಂಬೈ ಉದ್ಯಮಿಯೊಬ್ಬರನ್ನು ಕೆಲ ವ್ಯಕ್ತಿಗಳು ಬಂದೂಕು ತೋರಿಸಿ ಅಪಹರಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ಪೊಲೀಸರು ಉದ್ಯಮಿ ಅನುಪ್ ಕುಮಾರ್ ಶೆಟ್ಟಿಯವರನ್ನು ನೆರೆಯ ಥಾಣೆಯಿಂದ ರಕ್ಷಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಈ ಸಂಬಂಧ ಏಳು ಜನರನ್ನು ಬಂಧಿಸಲಾಗಿದೆ.

ಅಂಧೇರಿ-ಕುರ್ಲಾ ರಸ್ತೆಯಲ್ಲಿ ಶೆಟ್ಟಿ ನಡೆಸುತ್ತಿದ್ದ ಹೋಟೆಲ್ ವೀರಾ ರೆಸಿಡೆನ್ಸಿಯ  ಕ್ಯಾಬಿನ್‌ಗೆ ನಾಲ್ವರು ಪ್ರವೇಶಿಸಿದ್ದರು.

ಆರೋಪಿಗಳು ಹೋಟೆಲ್ ಮಾಲೀಕರಿಗೆ ಥಳಿಸಿದ್ದಾರೆ, ಪಿಸ್ತೂಲ್‌ಗಳಿಂದ ಮೂರು ಸುತ್ತು ಗುಂಡು ಹಾರಿಸಿದ್ದಾರೆ ಚಾಕುವಿನಿಂದ ಬೆದರರಿಸಿದ  ನಂತರ   ಅಪಹರಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಆರೋಪಿಗಳು ಅನುಪ್ ಶೆಟ್ಟಿಯನ್ನು ಥಾಣೆಗೆ ಕರೆದೊಯ್ದರು, ಅಲ್ಲಿಂದ ಸೋಮವಾರ ರಾತ್ರಿ ಪೊಲೀಸ್ ತಂಡವು ಶೆಟ್ಟಿ ಅವರನ್ನು ರಕ್ಷಿಸಿತು ಎಂದು ಅಧಿಕಾರಿ ಹೇಳಿದರು.

ಅಪಹರಣ, ಸುಲಿಗೆ, ಗಲಭೆ, ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು, ಕ್ರಿಮಿನಲ್ ಬೆದರಿಕೆ ಮತ್ತು ಶಸ್ತ್ರಾಸ್ತ್ರ ಕಾಯಿದೆಯ ನಿಬಂಧನೆಗಳಡಿ  ಏಳು ಜನರನ್ನು ಬಂಧಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Similar News