ಜೆಟ್ ಏರ್‌ವೇಸ್ ಕಚೇರಿ, ಸ್ಥಾಪಕ ನರೇಶ್ ಗೋಯಲ್ ನಿವಾಸ ಸೇರಿದಂತೆ ಮುಂಬೈಯ 7 ಸ್ಥಳಗಳಲ್ಲಿ ಸಿಬಿಐ ದಾಳಿ

Update: 2023-05-05 19:33 GMT

ಹೊಸದಿಲ್ಲಿ: 538 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಶುಕ್ರವಾರ ಮುಂಬೈಯಲ್ಲಿರುವ ಜೆಟ್ ಏರ್‌ವೇಸ್ ಕಚೇರಿ ಹಾಗೂ ಅದರ ಸ್ಥಾಪಕ ನರೇಶ್ ಅವರ ನಿವಾಸ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದೆ.

ಸಿಬಿಐ ದಾಳಿ ನಡೆಸಿದ ಸ್ಥಳಗಳಲ್ಲಿ ಗೋಯಲ್, ಅವರ ಪತ್ನಿ ಅನಿತಾ ಗೋಯಲ್ ಹಾಗೂ ಏರ್‌ಲೈನ್ಸ್‌ನ ಮಾಜಿ ನಿರ್ದೇಶಕ ಗೌರಂಗ್ ಆನಂದ್ ಶೆಟ್ಟಿ ಅವರ ನಿವಾಸ ಹಾಗೂ ಕಚೇರಿಗಳು ಸೇರಿವೆ.

ಕೆನರಾ ಬ್ಯಾಂಕ್ ದಾಖಲಿಸಿದ ದೂರಿನ ಆಧಾರದಲ್ಲಿ ಸಿಬಿಐ 538 ಕೋ.ರೂ. ಬ್ಯಾಂಕ್ ವಂಚನೆ ಪ್ರಕರಣ ದಾಖಲಿಸಿದೆ ಎಂದು ಅವರು ತಿಳಿಸಿದ್ದಾರೆ.

Similar News