ಚಾಮರಾಜನಗರ | ಆಕಸ್ಮಿಕ ಬೆಂಕಿ ತಗುಲಿ ರೇಷ್ಮೆ ಹುಳು ಸಾಕುವ ಮನೆ ಭಸ್ಮ

Update: 2024-06-20 13:50 GMT

ಚಾಮರಾಜನಗರ : ಆಕಸ್ಮಿಕ ಬೆಂಕಿ ತಗುಲಿ ರೇಷ್ಮೆ ಹುಳು ಸಾಕುವ ಮನೆ ಸಂಪೂರ್ಣ ಭಸ್ಮವಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಂಬಿಕಾಪುರ ಗ್ರಾಮದಲ್ಲಿ ಗುರುವಾರ ನಡೆದಿರುವುದಾಗಿ ವರದಿಯಾಗಿದೆ.

ತಾಲೂಕಿನ ಅಂಬಿಕಾಪುರ ಗ್ರಾಮದ ರೇಷ್ಮೆ ಬೆಳೆಗಾರ ಅರುಣ್ ಕುಮಾರ್ ಎಂಬುವರು ರೇಷ್ಮೆ ಹುಳು ಸಾಕಾಣಿಕೆ ಮಾಡಲು ತಮ್ಮ ಜಮೀನಿನಲ್ಲಿ ಕೊಟ್ಟಿಗೆಯನ್ನು ನಿರ್ಮಿಸಿದ್ದರು. ಆಕಸ್ಮಿಕ ಬೆಂಕಿ ಹೊತ್ತಿಕೊಂಡು ರೇಷ್ಮೆ ಹುಳು ಸಹಿತ ಅಗತ್ಯವಾದ ಚಂದ್ರಿಕೆಗಳು, ಕಟ್ಟಿಗೆಯ ರ್ಯಾಕ್, ಹಾಗೂ ವಿವಿಧ ಪರಿಕರಕಗಳು ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದದಿದೆ

ಘಟನೆ ಬೆನ್ನಲ್ಲೆ ರಾಮಾಪುರ ಪೋಲಿಸ್ ಠಾಣೆಯ ಎಎಸ್ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News